ಅಗಲಿದ ಬೆಳಗೆರೆಗೆ ಕಲೆಯ ಮೂಲಕ ನಮನ ಸಲ್ಲಿಸಿದ ಕಲಾವಿದ! - ಹಿರಿಯ ಪತ್ರಕರ್ತ ರವಿ ಬೆಳೆಗೆರೆ
ಧಾರವಾಡ : ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಅವರ ನಿಧನದ ಹಿನ್ನೆಲೆ ನಗರದ ಕಲಾವಿದನೋರ್ವ ವಿಶಿಷ್ಟ ನಮನ ಸಲ್ಲಿಸಿದ್ದಾರೆ. ಧಾರವಾಡದ ಕೆಲಗೇರಿ ಗಾಯತ್ರಿಪುರ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ರವಿ ಬೆಳೆಗೆರೆ ಭಾವಚಿತ್ರ ಬಿಡಿಸುವ ಮೂಲಕ ರವಿ ಬೆಳಗೆರೆ ಅವರಿಗೆ ಕಲಾ ನಮನ ಸಲ್ಲಿಸಿದ್ದಾರೆ.