ಕರ್ನಾಟಕ

karnataka

By

Published : Jan 19, 2021, 11:21 PM IST

ETV Bharat / videos

ಕಾರವಾರ: ನಾಯಿ ಹಿಡಿಯಲು ಬಂದು ಕೋಳಿ ಹೊತ್ತೊಯ್ದ ಚಿರತೆ... ವಿಡಿಯೋ

ಕಾರವಾರ: ನಾಯಿ ಬೊಗಳುವುದನ್ನ ಕೇಳಿ ಅಲ್ಲಿಗೆ ಬಂದ ಚಿರತೆಯೊಂದು ಶ್ವಾನ ಸಿಗದೇ ಕೋಳಿ ಹೊತ್ತೊಯ್ದಿರುವ ಘಟನೆ ಅಂಕೋಲಾ ತಾಲೂಕಿನ ಕೊಂಡಳ್ಳಿಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೊಂಡಳ್ಳಿ ಗ್ರಾಮದ ರಮಾನಂದ ಎಂಬುವವರ ಮನೆಯ ಬಳಿ ಬೆಳಗಿನ ಜಾವ ಆಗಮಿಸಿದ್ದ ಚಿರತೆಯೊಂದು ನಾಯಿ ಬೊಗಳುವ ಕಡೆ ತೆರಳಿ ಹುಡುಕಾಟ ನಡೆಸಿದೆ. ಆದರೆ ನಾಯಿ ಸಿಗದ ಹಿನ್ನೆಲೆಯಲ್ಲಿ ಅಲ್ಲೆ ಗೂಡಿನೊಳಗಿದ್ದ ಕೋಳಿ ಹಿಡಿದು ಕಾಡಿನತ್ತ ಓಡಿದೆ.

ABOUT THE AUTHOR

...view details