ಮಹಿಳೆಯರು ಅಧ್ಯಕ್ಷರು ಯಾಕಾಗಬಾರದು... ಮುಂದಿನ ಕನ್ನಡ ಸಮ್ಮೇಳನ ಹಾವೇರಿಯಲ್ಲಿ - ಉತ್ತರ ಕರ್ನಾಟಕದ ಶೈಲಿಯ ರುಚಿಕರ ಊಟ
ಶರಣರು, ಸೂಫಿ ಸಂತರ ನಾಡು, ತೊಗರಿ ಕಣಜ ಕಲಬುರಗಿಯಲ್ಲಿ ಅಕ್ಷರ ಜಾತ್ರೆ ವೈಭವ ಮುಂದುವರೆದಿದೆ. ಎರಡನೇ ದಿನವೂ ಲಕ್ಷಾಂತರ ಸಾಹಿತ್ಯಾಸಕ್ತರು ಮತ್ತು ಕನ್ನಡಾಭಿಮಾನಿಗಳು ನುಡಿಜಾತ್ರೆಗೆ ಆಗಮಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಸಾಹಿತ್ಯಾಸಕ್ತರು ಸಿದ್ದಪಡಿಸಲಾಗಿದ್ದ ಉತ್ತರ ಕರ್ನಾಟಕ ಶೈಲಿಯ ಊಟ ಸವಿದು ಬಾಯಿ ಚಪ್ಪರಿಸಿದ್ರು.