ತುಮಕೂರು ಜಿಲ್ಲೆಯಿಂದ 500 ಟ್ರ್ಯಾಕ್ಟರ್ಗಳು ರೈತರ ಜಾಥಾದಲ್ಲಿ ಭಾಗಿ: ಆನಂದ ಪಟೇಲ್ - 500 tractors from Tumkur district involved in farmer's parade
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಜ.26ರಂದು(ನಾಳೆ) ನಡೆಯಲಿರುವ ರೈತರ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳಲು ತುಮಕೂರು ಜಿಲ್ಲೆಯಿಂದ 500 ಟ್ರ್ಯಾಕ್ಟರ್ಗಳಲ್ಲಿ ತೆರಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಆನಂದ ಪಟೇಲ್ ಹೇಳಿದರು. ಸುಮಾರು 800 ಬಸ್ಗಳಲ್ಲಿ ರೈತರು ತುಮಕೂರು ಜಿಲ್ಲೆಯಿಂದ ಜಾಥದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜಾಥದಲ್ಲಿ ಪಾಲ್ಗೊಳ್ಳುವ ರೈತರನ್ನು ತಡೆದರೆ ಉಗ್ರ ಹೋರಾಟ ನಡೆಸುವುದಾಗಿ ಆನಂದ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
Last Updated : Jan 25, 2021, 1:14 PM IST