ಅಗಾಧ ಜ್ಞಾಪಕ ಶಕ್ತಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ದಾವಣಗೆರೆಯ ಬಾಲಕ! - ನಿನಾದ್ ಗುಪ್ತಾ ಸಾಧನೆ
ದಾವಣಗೆರೆ: ಈ ಬಾಲಕನ ವಯಸ್ಸು ಕೇವಲ ಮೂರು ವರ್ಷ. ಆದರೆ ಬುದ್ಧಿಶಕ್ತಿ ಮಾತ್ರ ಅಗಾಧ. ಮೂಲತಃ ದಾವಣಗೆರೆಯವರಾಗಿದ್ದು, ಸದ್ಯ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿವಾಸಿಗಳಾಗಿರುವ ದಂತ ವೈದ್ಯರಾದ ಡಾ. ಅಮರ್ ಹಾಗೂ ಡಾ. ಚಂದನ ದಂಪತಿಯ ಪುತ್ರ ನಿನಾದ್ ಗುಪ್ತಾ, ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ. ಈ ಪೋರನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.