ಕರ್ನಾಟಕ

karnataka

By

Published : Mar 24, 2021, 1:02 PM IST

ETV Bharat / videos

4 ದಿನಗಳಿಂದ ಮರದಲ್ಲೇ ಬೀಡುಬಿಟ್ಟ ಕಾಳಿಂಗ ಸರ್ಪ: ರಕ್ಷಿಸಿ ಕಾಡಿಗೆ ಬಿಟ್ಟ ಉರಗ ತಜ್ಞ

ಶಿರಸಿ: ಕಳೆದ ನಾಲ್ಕು ದಿನದಿಂದ ತೋಟದ ಮರದಲ್ಲೇ ಬೀಡುಬಿಟ್ಟಿದ್ದ 14 ಅಡಿ ಉದ್ದದ ಕಾಳಿಂಗಸರ್ಪವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಈ ಘಟನೆ ಶಿರಸಿ ತಾಲೂಕಿನ ರಾಗಿಹೊಸಳ್ಳಿಯಲ್ಲಿ ನಡೆದಿದೆ. ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ತೋಟದಲ್ಲಿ ಕಾಳಿಂಗ ಸರ್ಪವು ಕಳೆದ 4 ದಿನದಿಂದ ಮರದಲ್ಲೇ ಇದ್ದು, ಸ್ಥಳೀಯರಿಗೆ ಕೃಷಿ ಚಟುವಟಿಕೆ ಮಾಡಲು ಭಯ ಹುಟ್ಟಿಸಿತ್ತು. ತೋಟದ ಕೆಲಸಕ್ಕೆ ತೆರಳಲು ಸಾಧ್ಯವಾಗದೇ ರೈತರು ಮನೆಯಲ್ಲಿಯೇ ಕುಳಿತಿದ್ದರು. ನಂತರ ಸ್ಥಳೀಯರ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪವನ್​, 9.2 ಕೆ.ಜಿ ತೂಕದ 14 ಅಡಿ ಉದ್ದದ ಕಾಳಿಂಗವನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

...view details