ನನ್ನ ಬರ್ತ್ಡೇ ಸೆಲೆಬ್ರೇಟ್ ಬದಲು ಬಡವರಿಗೆ ದಿನಸಿ ಕಿಟ್ ನೀಡಿ ಎಂದ 'ಜೆಂಟಲ್ ಮನ್'!! - ನಟ ಪ್ರಜ್ವಲ್ ದೇವರಾಜ್
ಬೆಂಗಳೂರು : ಜುಲೈ ನಾಲ್ಕು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಪ್ರತಿವರ್ಷ ಅಭಿಮಾನಿಗಳು ಪ್ರಜ್ವಲ್ ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ, ಈಗ ಕೊರೊನಾ ಹಿನ್ನೆಲೆ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ನನ್ನನ್ನು ನೋಡಲು ಬರುವವರು ಕೇಕ್, ಹಾರದ ಬದಲಿಗೆ ಕಷ್ಟದಲ್ಲಿರುವ ಬಡವರಿಗೆ ದಿನಸಿ ಕಿಟ್ ನೀಡಿ ನೆರವಾಗಿ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಪ್ರಜ್ಜು ಮನವಿ ಮಾಡಿದ್ದಾರೆ.