ಕರ್ನಾಟಕ

karnataka

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಾಶ್ಮೀರದ ಮೊಘಲ್​ ಗಾರ್ಡನ್

By ETV Bharat Karnataka Team

Published : Nov 9, 2023, 11:04 PM IST

ETV Bharat / videos

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಾಶ್ಮೀರದ ಮೊಘಲ್​ ಗಾರ್ಡನ್ : ವಿಡಿಯೋ​

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಚಳಿಗಾಲ ಬಂತೆಂದರೆ ಸಾಕು ಕಾಶ್ಮೀರಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಕಾರಣ ಇಲ್ಲಿ ಬೀಳುವಂತ ಹಿಮದ ರಾಶಿ ಪ್ರವಾಸಿಗರ ಮನಸೆಳೆಯುತ್ತದೆ. ಅದರಲ್ಲೂ ಲಾಲ್​ ಸರೋವರದ ಬಳಿ ಇರುವ ಮೊಘಲ್​​ ಉದ್ಯಾನಕ್ಕೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.  

ಹೌದು, ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಉದ್ಯಾನವನದಲ್ಲಿನ ಚಿನಾರ್​ ಮರಗಳು ಎಲೆಗಳ ಬಣ್ಣವನ್ನು ಬದಲಿಸುತ್ತವೆ. ಸ್ವರ್ಣ ಬಣ್ಣಕ್ಕೆ ತಿರುಗಿ ಉದುರಿ ಬೀಳುವುದರಿಂದ ಇದು ಪ್ರವಾಸಿಗರಿಗೆ ಹೆಚ್ಚು ಆಕರ್ಷಿತವಾಗಿ ಕಾಣತೊಡಗುತ್ತದೆ. ಇಲ್ಲಿನ ರಮ್ಯವಾದ ನಿಸರ್ಗ ಸೌಂದರ್ಯವು ನೋಡುಗರ ಕಣ್ಮನ ಸೆಳೆಯುತ್ತದೆ. 

ಒಂದೆಡೆ ಸ್ವರ್ಣ ಬಣ್ಣದ ಚಿನಾರ್​ ಎಲೆಗಳು, ಮತ್ತೊಂದೆಡೆ ಅರಳಿದ ಕೇಸರಿ ಹೂವುಗಳು, ಕಾಶ್ಮೀರದ ಸೇಬಿನ ತೋಟಗಳು ಜನರನ್ನು ಆಕರ್ಷಣೆ ಮಾಡುತ್ತವೆ. ಹಾಗಾಗಿ  ಚಳಿಗಾಲದಲ್ಲಿ ಜನ ಈ ಮೊಘಲ್​ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. 

ಬಳಿಕ ಇದರ ಸಮೀಪದಲ್ಲೆ ಇರುವ ದಾಲ್​ ಸರೋವರಕ್ಕೂ ಭೇಟಿ ನೀಡಿ ಅಲ್ಲಿ ದೋಣಿ ವಿಹಾರದ ಮೂಲಕ ಆನಂದ ಪಡುತ್ತಾರೆ. ಈ ಹಿನ್ನೆಲೆ ಚಳಿಗಾಲ ಬಂತೆಂದರೆ ಕಾಶ್ಮೀರ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಾಡಾಗುತ್ತದೆ.   

ಇದನ್ನೂ ಓದಿ:ಋಷಿಕೇಶ: ಗಂಗಾರತಿ ಬೆಳಗಿದ ಬಾಲಿವುಡ್​ ನಟಿ ರವೀನಾ ಟಂಡನ್- ವಿಡಿಯೋ

ABOUT THE AUTHOR

...view details