ಪುಸ್ತಕ ಪಡೆಯಲು ಬಂದ ಕನ್ನಡಕ ಧರಿಸಿದ್ದ ವಿದ್ಯಾರ್ಥಿಯ ಸಮಸ್ಯೆ ಆಲಿಸಿದ ಸಿಎಂ - ಪಠ್ಯ ಪುಸ್ತಕ ತೆಗೆದು ಕೊಳ್ಳಲು ಬಂದ ವಿದ್ಯಾರ್ಥಿಯ ಕನ್ನಡಕ ಪರೀಕ್ಷಿಸಿದ ಸಿಎಂ
ತುಮಕೂರು:ಇಲ್ಲಿ ನಡೆದ ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಪಠ್ಯ ಪುಸ್ತಕ ವಿತರಣೆ ವೇಳೆ ಮುಖ್ಯಮಂತ್ರಿಯಿಂದ ಪಠ್ಯ ಪುಸ್ತಕಗಳನ್ನು ಪಡೆಯಲು ಬಂದ ಕನ್ನಡಕ ಹಾಕಿದ್ದ ವಿದ್ಯಾರ್ಥಿಯ ಕನ್ನಡಕವನ್ನು ತೆಗೆದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರೀಕ್ಷಿಸಿದ ಘಟನೆ ನಡೆಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಸರ್ಕಾರಿ ಶಾಲೆಯ ಮನೋಜ್ ಎಂಬ ವಿದ್ಯಾರ್ಥಿಯ ಕನ್ನಡಕವನ್ನು ಸ್ವತಃ ಹಾಕಿಕೊಂಡು ಮುಖ್ಯಮಂತ್ರಿ ಪರೀಕ್ಷೆ ಮಾಡಿದರು. ನಂತರ ಮನೋಜ್ನಿಗೆ ಕನ್ನಡಕ ಕೊಟ್ಟು ಕಳುಹಿಸಿದರು.
Last Updated : Feb 3, 2023, 8:23 PM IST