ಕರ್ನಾಟಕ

karnataka

ETV Bharat / videos

ನದಿಯಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್ ​- ಟ್ರಾಲಿ... ?

By

Published : Jul 30, 2022, 11:05 AM IST

Updated : Feb 3, 2023, 8:25 PM IST

ಹಿಮಾಚಲದಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗುತ್ತಿವೆ. ಭಾರೀ ಮಳೆಯಿಂದಾಗಿ ಹಳ್ಳ - ಕೊಳ್ಳ ಸೇರಿದಂತೆ ಉಪ ನದಿ-ನದಿಗಳು ತುಂಬಿ ಹರಿಯುತ್ತಿವೆ. ಶುಕ್ರವಾರ ಸಂಜೆ 6.30ರ ಸುಮಾರಿಗೆ ಸೋಲನ್ ಜಿಲ್ಲೆಯ ಬಲಾದ್‌ ಖಾಡ್‌ನಲ್ಲಿ ಮಾಲು ತುಂಬಿಕೊಂಡಿದ್ದ ಟ್ರ್ಯಾಕ್ಟರ್​ವೊಂದು ನದಿ ದಾಟಲು ಮುಂದಾಗಿತ್ತು. ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದ್ದು, ಟ್ರ್ಯಾಕ್ಟರ್​ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿತ್ತು. ಅದರಲ್ಲಿ ಮೂರು ಜನರಿದ್ದರು. ಈ ವೇಳೆ, ಟ್ರ್ಯಾಕ್ಟರ್​ನಲ್ಲಿದ್ದ ಮೂವರು ಟ್ರಾಲಿ ಮೇಲೆ ಹತ್ತಿ ಕೆಲಕಾಲ ನಿಂತಿದ್ದರು. ಆದರೆ ನದಿ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಮತ್ತು ಟ್ರಾಲಿ ಉರುಳಿ ಕೊಚ್ಚಿಕೊಂಡು ಹೋಗುತ್ತಿತ್ತು. ತಕ್ಷಣವೇ ಮೂವರೂ ನದಿಗೆ ಹಾರಿ ಬುದ್ಧಿವಂತಿಕೆಯಿಂದ ಈಜಿ ದಡ ಸೇರಿದರು. ಟ್ರ್ಯಾಕ್ಟರ್ ಸಮೇತ ಟ್ರಾಲಿ ಸಹ ಕೊಚ್ಚಿಕೊಂಡು ಹೋಗಿದೆ.
Last Updated : Feb 3, 2023, 8:25 PM IST

ABOUT THE AUTHOR

...view details