ನಂಜುಂಡೇಶ್ವರನ ದರ್ಶನ ಪಡೆದ ಅರ್ಜುನ ಸರ್ಜಾ - ಈಟಿವಿ ಭಾರತ ಕನ್ನಡ
ಮೈಸೂರು: ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯಕ್ಕಿಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆವರಣದಲ್ಲಿರುವ ಶ್ರೀನಂಜುಂಡೇಶ್ವರ, ಪಾರ್ವತಮ್ಮ, ಗಣಪತಿ, ನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿ ಕೆಲವು ಸಮಯ ದೇವಾಲಯದಲ್ಲಿ ಕಾಲ ಕಳೆದರು. ಇದಕ್ಕೂ ಮುನ್ನ ಅಭಿಮಾನಿಗಳು ನಟನಿಗೆ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡರು.
Last Updated : Feb 3, 2023, 8:29 PM IST