ತಾಯಿಯೊಂದಿಗೆ ಆಹಾರ ಅರಸಿ ಬಂದಿದ್ದ ಮರಿ ಆನೆ ಸೇರಿ ಮೂರು ಗಜಗಳು ವಿದ್ಯುತ್ ಪ್ರವಹಿಸಿ ಸಾವು : ಸ್ಥಳೀಯರಿಂದ ಅಂತ್ಯಕ್ರಿಯೆ - etv bharat kannada
ಗುವಾಹಟಿ (ಅಸ್ಸೋಂ):ಗುವಾಹಟಿ ಸಮೀಪದ ರಾಣಿ ಅರಣ್ಯ ಪ್ರದೇಶದ ಬಳಿ ವಿದ್ಯುತ್ ಸ್ಪರ್ಶದಿಂದ ಮೂರು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಕಳೆದ ರಾತ್ರಿ ಮೂರು ಆನೆಗಳು, ರಾಣಿ ಅರಣ್ಯ ಪ್ರದೇಶದ ಸಮೀಪದ ಪಾಣಿಚಂಡ ಎಂಬ ಪ್ರದೇಶದಲ್ಲಿನ ಅಡಕೆ ತೋಟಕ್ಕೆ ನುಗ್ಗಿವೆ. ಆಹಾರಕ್ಕಾಗಿ ಹುಡುಕಾಟ ನಡೆಸಿದ ಆನೆಗಳು ಅಡಕೆ ಮರಗಳನ್ನು ಕೆಳಗುರುಳಿಸಿ ತಿನ್ನಲು ಆರಂಭಿಸಿವೆ. ಈ ವೇಳೆ ಮರವೊಂದು ಹೈಟೆನ್ಷನ್ ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಪ್ರವಹಿಸಿದ್ದು, ಮರಿ ಆನೆ ಸೇರಿದಂತೆ ಮೂರು ಆನೆಗಳ ಸ್ಥಳದಲ್ಲೇ ಸಾವನ್ನಪ್ಪಿವೆ. ರಾಣಿ ವಿಭಾಗೀಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ವಿಧಿವಿಧಾನಗಳ ಪ್ರಕಾರ ಮೃತ ಆನೆಗಳ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
ತಮಿಳುನಾಡಲ್ಲೂ ಇಂತಹದ್ದೇ ಘಟನೆ:ತಮಿಳುನಾಡಿನ ಧರ್ಮಪುರಿ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆಯೊಂದು ಮೃತಪಟ್ಟ ಘಟನೆ ಇತ್ತೀಚೆಗೆಷ್ಟೇ ನಡೆದಿತ್ತು. ಆಹಾರ ಅರಸಿ ಗಂಡಾನೆಯೊಂದು ನಾಡಿಗೆ ಬಂದಿತ್ತು. ಇಲ್ಲಿನ ಕಂಬಿನಲ್ಲೂರು ಸಮೀಪದ ಕೆಲವಳ್ಳಿ ಪ್ರದೇಶದಲ್ಲಿ ಆನೆ ತಿರುಗಾಟ ನಡೆಸಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಆನೆ ಸ್ಥಳದಲ್ಲೇ ಕುಸಿದು ಬಿದ್ದಿತ್ತು. ಆನೆಗೆ ವಿದ್ಯುತ್ ತಂತಿ ತಗುಲಿದದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದ್ದರು.
ಇದನ್ನೂ ಓದಿ:ಆಹಾರ ಅರಸಿ ಬಂದಿದ್ದ ಗಂಡಾನೆ ವಿದ್ಯುತ್ ತಂತಿಗೆ ಸಿಲುಕಿ ಸಾವು: ವಿಡಿಯೋ