ಕರ್ನಾಟಕ

karnataka

ಸುದೀಪ್ ಇನ್ನೂ‌ ಕಾಂಗ್ರೆಸ್ ಪಕ್ಷ ಸೇರಿಲ್ಲ: ಸಚಿವ ಸುಧಾಕರ್

By

Published : Feb 3, 2023, 10:53 PM IST

Updated : Feb 6, 2023, 4:07 PM IST

ಆರೋಗ್ಯ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ನಟ ಸುದೀಪ್ ಅವರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ‌ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಸುದೀಪ್​ ಕಾಣಿಸಿಕೊಂಡ ಬೆನ್ನಲ್ಲೇ ರಾಜಕೀಯ ವಲಯದಲ್ಲಿ‌ ಸಾಕಷ್ಟು ಚರ್ಚೆ ನಡೆಯುತ್ತಿದೆ. "ನನ್ನ ಪ್ರಕಾರ ಸುದೀಪ್ ಇನ್ನೂ ಕಾಂಗ್ರೆಸ್‌ ಸೇರಿಲ್ಲ. ಅವರು ರಾಜ್ಯದ ಉತ್ತಮ ನಾಯಕ ನಟ. ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸುದೀಪ್ ಹಾಗೂ ದರ್ಶನ್ ಯಾವುದೇ ಪಕ್ಷಕ್ಕೆ ಸೇರಿದ್ರೂ ಆ ಪಕ್ಷಗಳಿಗೆ ಒಳ್ಳೆಯದಾಗುತ್ತದೆ. ಅವರು ಏನು ತೀರ್ಮಾನ ತಗೊಳ್ತಾರೋ ನೋಡೋಣ" ಎಂದರು.

ಇದನ್ನೂ ಓದಿ:ಸಿಡಿ ಪ್ರಕರಣ: ಸಿಬಿಐಗೆ ತನಿಖೆ ಕುರಿತು ಜಾರಕಿಹೊಳಿ ಮಾತುಕತೆ ನಡೆಸಿಲ್ಲ- ಪ್ರಹ್ಲಾದ್ ಜೋಷಿ

Last Updated : Feb 6, 2023, 4:07 PM IST

ABOUT THE AUTHOR

...view details