ಕರ್ನಾಟಕ

karnataka

By

Published : Jul 27, 2022, 9:11 PM IST

Updated : Feb 3, 2023, 8:25 PM IST

ETV Bharat / videos

ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ: ಭದ್ರತೆಗಾಗಿ ಒಟ್ಟು 22 ಸಾವಿರ ಪೊಲೀಸರ ನಿಯೋಜನೆ

ಚೆನ್ನೈ: ಜುಲೈ 28, 29 ರಂದು ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರಿಗೆ 7 ಹಂತದ ಭದ್ರತೆ ಕೈಗೊಳ್ಳಲಾಗುವುದು ಎಂದು ಚೆನ್ನೈನ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ತಿಳಿಸಿದ್ದಾರೆ. ಮಾಮಲ್ಲಪುರಂನಲ್ಲಿ ನಡೆಯಲಿರುವ 44ನೇ ಚೆಸ್ ಒಲಂಪಿಯಾಡ್ ಪಂದ್ಯಾವಳಿ ಉದ್ಘಾಟಿಸಲು, ಗಿಂಡಿಯ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ 42ನೇ ಪದವಿ ಪ್ರದಾನ ಸಮಾರಂಭಕ್ಕಾಗಿ ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸುತ್ತಿದ್ದಾರೆ. ಭದ್ರತೆ ಕುರಿತು ಮಾತನಾಡಿದ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು, ನಿಯಮಿತವಾಗಿ 5 ಹಂತದ ಭದ್ರತೆ ಇರುತ್ತದೆ. ಆದರೆ, ಈ ಬಾರಿ ನಾವು ಅದನ್ನು 7 ಹಂತದ ಭದ್ರತೆ ನೀಡಲಿದ್ದೇವೆ. ಎಸ್‌ಪಿಜಿ, ಕೋರ್ ಸೆಲ್ ಸೆಕ್ಯುರಿಟಿ, ಸೆಕ್ಯುರಿಟಿ ಬ್ರಾಂಚ್, ಸ್ಥಳೀಯ ಪೊಲೀಸ್, ಎಆರ್ ಜೊತೆಗೆ ಗಾರ್ಡ್‌ಗಳು 7 ಹಂತದ ಭದ್ರತೆಯಲ್ಲಿ ಒಳಗೊಂಡಿದ್ದಾರೆ. ಒಟ್ಟು 22 ಸಾವಿರ ಪೊಲೀಸರು ಕರ್ತವ್ಯದಲ್ಲಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Last Updated : Feb 3, 2023, 8:25 PM IST

ABOUT THE AUTHOR

...view details