ಕರ್ನಾಟಕ

karnataka

Watch.. ಕೇದಾರನಾಥಕ್ಕೆ ಬಂದಿದ್ದ ಭಕ್ತ ಅಸ್ವಸ್ಥ: ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ಕೊಡಿಸಿದ SDRF

By

Published : Jul 4, 2023, 5:53 PM IST

Updated : Jul 4, 2023, 9:22 PM IST

ಸ್ಟ್ರೆಚರ್ ಮೂಲಕ ಭಕ್ತನನ್ನು ಆಸ್ಪತ್ರೆಗೆ ಕರೆದೊಯ್ದು ಎಸ್​ಡಿಆರ್​ಪಿ ತಂಡ

Kedarnath Rescue Video:ಕೇದಾರನಾಥಕ್ಕೆ ಆಗಮಿಸಿದ್ದ ಭಕ್ತರೊಬ್ಬರು ನಿನ್ನೆ ರಾತ್ರಿ ಹೃದ್ರೋಗ ಸಮಸ್ಯೆವುಂಟಾಗಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಎಸ್​​ಡಿಆರ್ ಎಫ್ ತಂಡವೂ ತತಕ್ಷಣ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಲಿಂಚೋಳಿ ಬಳಿ  ದಿಢೀರ್​ನೆ ಭಕ್ತರೊಬ್ಬರು ಅನಾರೋಗ್ಯಪೀಡಿತರಾಗಿದ್ದನ್ನು ಸಮೀಪದ ಛಾನಿ ಕ್ಯಾಂಪ್​​ನ ಅಂಗಡಿಕಾರರು ಎಸ್​​ಡಿಆರ್​ಎಫ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದ ತಕ್ಷಣ ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಸಾಧನಗಳೊಂದಿಗೆ ಸ್ಥಳಕ್ಕೆ ತೆರಳಿ, ತ್ವರಿತವಾಗಿ ಭಕ್ತನನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭಕ್ತನ ಸ್ಥಿತಿ ಗಮನಿಸಿದ  ವೈದ್ಯರು ತಕ್ಷಣ ಅವರನ್ನು ಸೋನಪ್ರಯಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.

ಎಸ್‌ಡಿಆರ್‌ಎಫ್ ತಂಡವು ಸಮಯ ವ್ಯಯ ಮಾಡದೇ, ಲಿಂಚೋಲಿಯಿಂದ ಭೀಮಾಲಿಗೆ ಕಳುಹಿಸಿ ಸೋನ್‌ಪ್ರಯಾಗಕ್ಕೆ ಕಳುಹಿಸಿ ಡಿಡಿಆರ್‌ಎಫ್ ತಂಡಕ್ಕೆ ಹಸ್ತಾಂತರಿಸಿದರು. 

ಹವಾಮಾನದಲ್ಲಿ ಬದಲಾವಣೆ:ನಿಜವಾಗಿ ಹೇಳಬೇಕೆಂದರೆ, ಇತ್ತೀಚಿನ ದಿನಗಳಲ್ಲಿ ಕೇದಾರನಾಥದ ಘಾಟಿಯಲ್ಲಿ ಕೊರೆಯುವ ಚಳಿಯಾಗುತ್ತಿದೆ. ಬೆಟ್ಟಗಳ ಮೇಲೆ ಹಿಮ ಬೀಳುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಆರ್ದ್ರತೆ ಹೆಚ್ಚಾಗಿದೆ. ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉತ್ತರಾಖಂಡ ಪೊಲೀಸರು ಮತ್ತು ಸರ್ಕಾರವು ಭಕ್ತರಿಗೆ ಹವಾಮಾನದ ಮಾಹಿತಿ ಮತ್ತು ಸದೃಢ ಆರೋಗ್ಯ ಹೊಂದಿದ್ದವರು ಮಾತ್ರ ಯಾತ್ರೆಗೆ ಬರುವಂತೆ ನಿರಂತರ ಸೂಚನೆಗಳನ್ನು ನೀಡುತ್ತಿದೆ.

ಭಾರಿ ಭೂಕುಸಿತ:ಪರ್ವತಗಳಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪಿಥೋರಗಢ್ ಜಿಲ್ಲೆಯ ಧಾರ್ಚುಲಾದಿಂದ 5 ಕಿಲೋ ಮೀಟರ್ ಮುಂದಿರುವ ದೋಬತ್ ಪ್ರದೇಶದ ವ್ಯಾಪ್ತಿ  ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದೆ. ಚೀನಾ ಗಡಿಯನ್ನು ಸಂಪರ್ಕಿಸುವ ಈ ಧರ್ಮಗ್ರಂಥದ ಮಾರ್ಗಕ್ಕೂ ಅಡಚಣೆಯಾಗಿದೆ. ಜಿಲ್ಲಾದ್ಯಂತ 23 ರಸ್ತೆಗಳು ಮುಚ್ಚಲ್ಪಟ್ಟಿದ್ದು, ಎಲ್ಲ ರಸ್ತೆಗಳನ್ನು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು  ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.

ಇದನ್ನೂಓದಿ:19 ವರ್ಷದ ಹಿಂದೆ ಮನೆ ತೊರೆದಿದ್ದ ಮಹಿಳೆ ದಿಢೀರ್​​ ಪತ್ತೆ.. ಹುಡುಕಿ ಹುಡುಕಿ ಸುಸ್ತಾಗಿದ್ದ ಕುಟುಂಬಸ್ಥರಲ್ಲಿ ಸಂತಸದ ಹೊನಲು!

Last Updated : Jul 4, 2023, 9:22 PM IST

ABOUT THE AUTHOR

...view details