ಕರ್ನಾಟಕ

karnataka

ETV Bharat / videos

ಹಿನ್ನೀರಲ್ಲಿ ಮುಳುಗುತ್ತಿದ್ದ ಮರಿ ಆನೆಯ ಪ್ರಾಣ ಕಾಪಾಡಿದ ಪತ್ರಕರ್ತನ ಸಮಯಪ್ರಜ್ಞೆ- ವಿಡಿಯೋ - ಪತ್ರಕರ್ತನ ಸಮಯ ಪ್ರಜ್ಞೆ

🎬 Watch Now: Feature Video

ಆನೆ ಮರಿ ರಕ್ಷಣೆ

By

Published : Mar 24, 2023, 11:53 AM IST

ಚಾಮರಾಜನಗರ: ಪತ್ರಕರ್ತನ ಸಮಯ ಪ್ರಜ್ಞೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದು ತಾಯಿ ಮಡಿಲು ಸೇರಿದೆ. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಪಾಲಾರ್ ಅರಣ್ಯ ಪ್ರದೇಶದ ಬೀಟ್​​ನಲ್ಲಿ ಗುರುವಾರ ಘಟನೆ ನಡೆಯಿತು. ದಿನಪತ್ರಿಕೆಯೊಂದರ ವರದಿಗಾರ ಜಿ.ಪ್ರದೀಪ್ ಕುಮಾರ್ ಮತ್ತು ಅವರ ಕುಟುಂಬ ತಮಿಳುನಾಡಿನ ಕೊಳತ್ತೂರಿಗೆ ತೆರಳುತ್ತಿದ್ದರು. ಆಗ ಮೆಟ್ಟೂರು ಹಿನ್ನೀರು ದಾಟಲು ತೆರಳಿ ಆನೆಮರಿ ಮುಳುಗುತ್ತಿದ್ದುದನ್ನು ಅವರು ಗಮನಿಸಿದ್ದಾರೆ. ಕೂಡಲೇ ಪ್ರದೀಪ್ ಹಾಗೂ ಕುಟುಂಬಸ್ಥರು ಅಂದಾಜು ಒಂದು ತಾಸು ಶ್ರಮಿಸಿ ಆನೆಮರಿಯನ್ನು ಕಾಪಾಡಿ ತಮಿಳುನಾಡಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ತಾಯಿಯ ಮಡಿಲು ಸೇರಿಸಿದ್ದಾರೆ. ಆನೆ ಮರಿ ಜನಿಸಿ ಕೇವಲ 2 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಊರಿನತ್ತ ಬಂದ ಮರಿ ಆನೆ ರಕ್ಷಣೆ: ತಾಯಿ ಆನೆಯ ಅಗಲಿಕೆಯಿಂದ ಅನಾಥವಾದ ಮರಿ ಆನೆ ದನಗಳೊಂದಿಗೆ ಊರಿನತ್ತ ಬಂದಿದ್ದ ಘಟನೆ ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ನಡೆದಿತ್ತು. ಹಳ್ಳಿಗೆ ಬಂದ ಮರಿ ಆನೆಯನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ:ತಾಯಿ ಅಗಲಿಕೆ ಬಳಿಕ ದನಗಳೊಂದಿಗೆ ಊರಿನತ್ತ ಬಂದ ಮರಿ ಆನೆ ರಕ್ಷಣೆ

ABOUT THE AUTHOR

...view details