ಕರ್ನಾಟಕ

karnataka

ಭಾರತಕ್ಕೆ ಶುಭಕೋರಿದ ರಾಜಕೀಯ ನಾಯಕರು

By ETV Bharat Karnataka Team

Published : Nov 18, 2023, 9:49 PM IST

ETV Bharat / videos

ವಿಶ್ವಕಪ್​ ಫೈನಲ್​ ಪಂದ್ಯ: ಭಾರತಕ್ಕೆ ಶುಭಕೋರಿದ ರಾಜಕೀಯ ನಾಯಕರು

ದಾವಣಗೆರೆ: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್​ ಫೈನಲ್​ ಕದನ ನಡೆಲಿದೆ. ಈ ಪಂದ್ಯಕ್ಕೆ ರಾಜಕೀಯ ನಾಯಕರು ಭಾರತ ತಂಡಕ್ಕೆ ಶುಭಕೋರಿದ್ದಾರೆ. ಮಾಜಿ ಸಚಿವರಾದ ಶ್ರೀ ರಾಮುಲು, ಎಂಪಿ ರೇಣುಕಾಚಾರ್ಯ,  ಚಿತ್ರದುರ್ಗದ ಹಾಲಿ ಶಾಸಕ ವೀರೇಂದ್ರ ಪಪ್ಪಿ, ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಶುಭ ಕೋರಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀ ರಾಮುಲು, ಈ ಸಲ ಜಗತ್ತಿನ ಅತ್ಯಂತ ಮೆಚ್ಚಿನ ತಂಡ ಎಂದರೆ ಅದು ಟೀಮ್ ಇಂಡಿಯಾ. ಟೂರ್ನಿಯಲ್ಲಿ ಆಡಿದ 10 ಪಂದ್ಯಗಳನ್ನು ಜಯಿಸಿ ಭಾರತ ಫೈನಲ್​​ ಪ್ರವೇಶ ಮಾಡಿದೆ. ನಾಳೆ ನಡೆಯಲಿರುವ ವಿಶ್ವಕಪ್ ಪೈನಲ್​ನಲ್ಲಿ ಇಂಡಿಯಾ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಮಾಜಿ ಸಚಿವ ಶ್ರೀರಾಮಲು ದಾವಣಗೆರೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. 

ರೇಣುಕಾಚಾರ್ಯ ಶುಭಹಾರೈಕೆ:ಫೈನಲ್ ಪಂದ್ಯಕ್ಕೆ ಎಂಪಿ ರೇಣುಕಾಚಾರ್ಯ ಅವರೂ ಶುಭಾಶಯ ಕೋರಿದರು. ಈ ವೇಳೆ, ಮಾತನಾಡಿದ ಅವರು, ಫೈನಲ್ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ಪ್ರಧಾನಿ ತೆರಳಲಿದ್ದಾರೆ. ಎಲ್ಲ ಪಂದ್ಯಗಳಲ್ಲಿ ಗೆದ್ದು ಬೀಗಿದ ತಂಡಕ್ಕೆ ಶುಭ ಹಾರೈಸುವೆ‌. ಅದ್ಭುತ ಆಟ ಆಡಿ ವಿಶ್ವ ಕಪ್ ತಂದುಕೊಡಲಿ ಎಂದು ಆಶಿಸುವೆ ಎಂದರು. ಈ ವೇಳೆ, ವರ್ಲ್ಡ್ ಕಪ್ ಫೈನಲ್ ಪಂದ್ಯಕ್ಕೆ ಶುಭ ಹಾರೈಸಿದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ನಾಳೆಯ ಪಂದ್ಯದಲ್ಲಿ ನಮ್ಮ ಭಾರತ ಗೆದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಆರ್​.ಅಶೋಕ್​:ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ದೇಶದ ಜನತೆ ಭಾರತೀಯ ಕ್ರಿಕೆಟ್ ತಂಡದ ಜೊತೆಗಿದ್ದಾರೆ, ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಂತಾಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಶುಭ ಕೋರಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಫೈನಲ್​ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು: ಅಂಡರ್ 19 ಕ್ರಿಕೆಟ್ ಆಟಗಾರ ಕನಿಷ್ಕ್ ವಿಶ್ವಾಸ

ABOUT THE AUTHOR

...view details