ಕರ್ನಾಟಕ

karnataka

ಹೆಚ್ಎಎಲ್ ವಿಮಾನ ನಿಲ್ದಾಣದ ಬಳಿ ಕೆಲಕಾಲ ಅಣ್ಣಾಮಲೈರನ್ನ ತಡೆದ ಪೊಲೀಸರು

By

Published : May 7, 2023, 8:35 PM IST

ETV Bharat / videos

ಹೆಚ್ಎಎಲ್ ವಿಮಾನ ನಿಲ್ದಾಣದ ಬಳಿ ಅಣ್ಣಾಮಲೈರನ್ನ ತಡೆದ ಪೊಲೀಸರು..

ಬೆಂಗಳೂರು : ಬೆಂಗಳೂರಿನಲ್ಲಿ ಎರಡನೇ ದಿನದ ರೋಡ್ ಶೋ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಹೆಚ್ಎಎಲ್​ನಿಂದ ಶಿವಮೊಗ್ಗಕ್ಕೆ ತೆರಳಿದ್ದಾರೆ‌. ಪ್ರಧಾನಿ ತೆರಳುವ ವೇಳೆ ರಾಜ್ಯ ಬಿಜೆಪಿಯ ಚುನಾವಣಾ ಸಹ ಉಸ್ತುವಾರಿ ಕೆ ಅಣ್ಣಾಮಲೈ ಅವರನ್ನ ಪೊಲೀಸರು ಹೆಚ್ಎಎಲ್ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಕೆಲಕಾಲ ತಡೆದ ಪ್ರಸಂಗ ನಡೆದಿದೆ.

ಇದನ್ನೂ ಓದಿ:ಪ್ರಧಾನಿ ಬೆಂಗಳೂರು ರೋಡ್ ಶೋಗೆ ತೆರೆ; ಎರಡು ದಿನ ಒಟ್ಟು 32.5 ಕಿ.ಮೀ. ಮೋದಿ ಮೋಡಿ ಮೂಲಕ ಮತಬೇಟೆ

ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಬಿಜೆಪಿಯ ಚುನಾವಣಾ ಸಹ ಪ್ರಭಾರಿಯಾಗಿರುವ ಕೆ ಅಣ್ಣಾಮಲೈ ಪ್ರಧಾನಿ ರೋಡ್ ಶೋನಲ್ಲಿ‌ ಭಾಗಿಯಾಗಿ ಬಳಿಕ ವಾಪಸ್ ತೆರಳಲು ಹೆಚ್ಎಎಲ್ ವಿಮಾನ ನಿಲ್ದಾಣದ ಬಳಿ‌ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಸೇನಾ ವಿಶೇಷ ವಿಮಾನದ ಮೂಲಕ ಪ್ರಧಾನಿಯವರು ಶಿವಮೊಗ್ಗಕ್ಕೆ ತೆರಳಲು‌ ನಿಗದಿಯಾಗಿದ್ದರಿಂದ ಯಾರನ್ನು ಒಳಗಡೆ ಬಿಡದಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ಆದ್ದರಿಂದ ಪ್ರವೇಶ ದ್ವಾರದ ಬಳಿ ಪೊಲೀಸರೊಂದಿಗೆ ಚರ್ಚಿಸಿದ ಅಣ್ಣಾಮಲೈ ಕೆಲ ನಿಮಿಷಗಳ ಕಾಲ ಕಾದು ನಂತರ ಒಳಗೆ ತೆರಳಿದರು.

ಇದನ್ನೂ ಓದಿ :ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ..

ABOUT THE AUTHOR

...view details