ಕರ್ನಾಟಕ

karnataka

ETV Bharat / videos

ದೊಡ್ಡಾಟದಲ್ಲಿ ವೃಷಸೇನ ಪಾತ್ರ.. ಇನ್ಸ್​ಪೆಕ್ಟರ್ ಕಾಲಿಮಿರ್ಚಿ ಕಲೆಗೆ ಮನಸೋತ ಜನ - ಪೊಲೀಸ್​ ಅಧಿಕಾರಿ ಗಮನ

By

Published : Sep 12, 2022, 1:40 PM IST

Updated : Feb 3, 2023, 8:27 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಾಂಪ್ರದಾಯಿಕ ಪ್ರಸಿದ್ಧ ಕಲೆ ದೊಡ್ಡಾಟದಲ್ಲಿ ನಗರದ ಪೊಲೀಸ್ ಅಧಿಕಾರಿಯೊಬ್ಬರು ಬಣ್ಣ ಹಚ್ಚಿ ಕಲಾಭಿಮಾನಿಗಳು ಮನರಂಜಿಸಿದ್ದಾರೆ. ಡಾ. ಚಂದ್ರಶೇಖರ ಕಂಬಾರ ಅವರ ದತ್ತಿ ಕಾರ್ಯಕ್ರಮದಲ್ಲಿ ಕರ್ಣಪರ್ವ ಎಂಬ ದೊಡ್ಡಾಟದಲ್ಲಿ ಕಲೆ ಪ್ರದರ್ಶಿಸುವ ಮೂಲಕ ಪೊಲೀಸ್​ ಅಧಿಕಾರಿ ಗಮನ ಸೆಳೆದರು. ಈ ದೊಡ್ಡಾಟದಲ್ಲಿ ಗೋಕುಲ ರಸ್ತೆಯ ಪೊಲೀಸ್ ಠಾಣಾ ಪೊಲೀಸ್ ಇನ್ಸ್​ಪೆಕ್ಟರ್ ಜೆಎಮ್ ಕಾಲಿಮಿರ್ಚಿ ಅವರು ವೃಷಸೇನ (ಕರ್ಣನ ಮಗ) ಪಾತ್ರದಲ್ಲಿ ವಿಶೇಷ ವೇಷಭೂಷಣ ಧರಿಸಿ ಕಲಾಭಿಮಾನಿಗಳನ್ನು ಮನರಂಜಿದರು. ಇನ್ಸ್​ಪೆಕ್ಟರ್​ ಕಾಲಿಮಿರ್ಚಿ ಅವರ ಕಲೆಯನ್ನು ಸಾರ್ವಜನಿಕರು ಕೊಂಡಾಡಿದ್ದು, ಪೊಲೀಸ್ ಇಲಾಖೆ ಕೂಡಾ ಪ್ರಶಂಸೆ ವ್ಯಕ್ತಪಡಿಸಿದೆ.
Last Updated : Feb 3, 2023, 8:27 PM IST

ABOUT THE AUTHOR

...view details