ಕರ್ನಾಟಕ

karnataka

By

Published : Dec 9, 2022, 8:22 PM IST

Updated : Feb 3, 2023, 8:35 PM IST

ETV Bharat / videos

'ನನ್ನಮ್ಮ ಸೂಪರ್ ಸ್ಟಾರ್' ಖ್ಯಾತಿಯ ಪುಟಾಣಿ ವಂಶಿಕ ಡೈಲಾಗ್ ವೈರಲ್

ಉಡುಪಿ: 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮ ಖ್ಯಾತಿಯ ಪುಟಾಣಿ ವಂಶಿಕ, ಉಡುಪಿಯ ಬಾಲಕೃಷ್ಣನ ಸನ್ನಿಧಿಯಲ್ಲಿ ಹೇಳಿದ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ನರಸಿಂಹದೇವರ ಆರಾಧಕ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ತೊಡೆಮೇಲೆ ಪ್ರಹ್ಲಾದನಂತೆ ಕುಳಿತಿರುವ ಮಗು, ಹಿರಣ್ಯಕಶಿಪುವಿನ ಡೈಲಾಗ್‌ಗಳನ್ನು ಹೇಳಿ ಅಚ್ಚರಿ ಮೂಡಿಸಿದಳು. ಇತ್ತೀಚಿಗಷ್ಟೇ ಟಿವಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ವಂಶಿಕ ಹಿರಣ್ಯಕಶಿಪು ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದಳು. ವಂಶಿಕ ಕಿರುತೆರೆಯ ಜನಪ್ರಿಯ ಸೆಲೆಬ್ರೆಟಿ ಆಂಕರ್ ಮಾಸ್ಟರ್ ಆನಂದ್ ಅವರ ಪುತ್ರಿ.
Last Updated : Feb 3, 2023, 8:35 PM IST

ABOUT THE AUTHOR

...view details