ಕರ್ನಾಟಕ

karnataka

By

Published : Dec 21, 2022, 3:19 PM IST

Updated : Feb 3, 2023, 8:36 PM IST

ETV Bharat / videos

ಮಂಡ್ಯದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕುಸಿದು ಬಿದ್ದ ಶಾಸಕ ತಮ್ಮಣ್ಣ

ಮಂಡ್ಯ : ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇಂದು ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಿ ಸಿ ತಮ್ಮಣ್ಣ ಹೆಚ್​​ಡಿಕೆ ಜೊತೆಗೆ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ತೆರೆದ ವಾಹನದಲ್ಲಿ ಹೋಗುತ್ತಿದ್ದ ಶಾಸಕ ಡಿಸಿ ತಮ್ಮಣ್ಣ ವಾಹನದಲ್ಲೇ ಕುಸಿದುಬಿದ್ದರು. ತಕ್ಷಣ ತಮ್ಮಣ್ಣ ಅವರಿಗೆ ನೀರು ಕುಡಿಸಿ ಗಾಳಿ ಬೀಸಿ ಆರೈಕೆ ಮಾಡಲಾಯಿತು. ಬಳಿಕ ಅಲ್ಲಿಂದ ನೇರವಾಗಿ ವೈದ್ಯರ ಸಲಹೆ ಪಡೆಯಲು ತೆರಳಿದ್ದಾರೆ ಎಂದು ತಿಳಿದುಬಂದಿದೆ.
Last Updated : Feb 3, 2023, 8:36 PM IST

ABOUT THE AUTHOR

...view details