ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡ ಸಚಿವ ಶ್ರೀರಾಮುಲು.. - Sabarimalai
ಬಳ್ಳಾರಿ: ಸಚಿವ ಬಿ ಶ್ರೀರಾಮುಲು ಅವರು ಸ್ವಾಮಿ ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಶ್ರೀರಾಮುಲು ಅವರು ಕಳೆದ ಐದು ವರ್ಷಗಳಿಂದ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ಅಯ್ಯಪ್ಪನ ಮಾಲೆ ಧರಿಸುತ್ತಿದ್ದಾರೆ. ಇಂದು ಸಹ ಸಚಿವ ಶ್ರೀರಾಮುಲು ತಲೆ ಮೇಲೆ ಇರುಮುಡಿ ಹೊತ್ತು ಸುಮಾರು 21 ಜನರೊಂದಿಗೆ ಶಬರಿಮಲೆ ಯಾತ್ರೆಗೆ ತೆರಳಿದರು. ನಾಳೆ ಶಬರಿಮಲೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ.
Last Updated : Feb 3, 2023, 8:23 PM IST