ಹಾಡಹಗಲೇ ಕೆ ಆರ್ ನಗರದ ಬಡಾವಣೆಗೆ ನುಗ್ಗಿ ಚಿರತೆ ದಾಳಿ: ವಿಡಿಯೋ - leopard attack in mysore
ಮೈಸೂರು: ಕೆ ಆರ್ ನಗರ ಪಟ್ಟಣದ ಹೊರ ವಲಯದಲ್ಲಿರುವ ಕನಕ ನಗರಕ್ಕೆ ಬೆಳ್ಳಂಬೆಳಗ್ಗೆ ಚಿರತೆ ನುಗ್ಗಿ ಕೆಲವರ ಮೇಲೆ ದಾಳಿ ನಡೆಸಿದೆ. ಮುಳ್ಳೂರು ರಸ್ತೆ ಬಳಿಯ ರಾಜ ಪ್ರಕಾಶ್ ಶಾಲೆ ಹತ್ತಿರ ಚಿರತೆಯೊಂದು ಬೀದಿ ನಾಯಿಯನ್ನು ಹಿಡಿಯಲು ಬಂದಾಗ ರಸ್ತೆ ದಾಟುತ್ತಿದ್ದ ಬೈಕ್ ಸವಾರನ ಮೇಲೆ ಎರಗಿದೆ. ಆನಂತರ ಮತ್ತಿಬ್ಬರ ಮೇಲೆ ದಾಳಿ ನಡೆಸಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:31 PM IST