ಕರ್ನಾಟಕ

karnataka

ತಂದೆ ಪಕ್ಷ ಸಂಘಟನಾಗಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ: ಕೆ.ಈ.ಕಾಂತೇಶ್

By

Published : Apr 11, 2023, 10:07 PM IST

ಕೆ ಈ ಕಾಂತೇಶ್

ಶಿವಮೊಗ್ಗ :ನಮ್ಮ ತಂದೆ ಯಾರ ಒತ್ತಡಕ್ಕೂ ಮಣಿಯದೆ, ಸಂಘಟನೆಯ ಒಳಿತಿಗಾಗಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅಜ್ಜಿಯ ಮಗನಾಗಿ ರಾಜ್ಯದ ಉಪ‌ಮುಖ್ಯಮಂತ್ರಿಯಾಗಿ ಬೆಳೆಸಿದ್ದು ಬಿಜೆಪಿ. ನಮ್ಮ ತಂದೆ ಏನೇ ನಿರ್ಧಾರ ಮಾಡಿದ್ರೂ ಸಾಕಷ್ಟು ಬಾರಿ ಚಿಂತಿಸಿ ನಿರ್ಧಾರ ತೆಗೆದುಕೊಂಡಿರುತ್ತಾರೆ. ಸಂಘಟನೆ ಹಾಗೂ ಪಕ್ಷಕ್ಕೆ ಮುಜಗರ ಆಗಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನು ಹಿರಿಯರು ಪರಿಗಣಿಸುತ್ತಾರೆ. ಅವರು ಸಂಘಟನೆ ಯಾವ ರೀತಿ ಹೇಳುತ್ತದೆಯೋ ಅದನ್ನು ಮಾಡಿದ್ದಾರೆ. ಇದರಿಂದ ಯಾವ ಕಾರ್ಯಕರ್ತರೂ ಆತಂಕಕ್ಕೆ ಒಳಗಾಗಬಾರದು ಎಂದರು. 

ತಂದೆ ಮೇಲೆ ಯಾವುದೇ ಒತ್ತಡವಿಲ್ಲ: ತಂದೆಯವರು ಸಣ್ಣ ಹುಡುಗ ಅಲ್ಲ. 30-40 ವರ್ಷಗಳಿಂದ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರದೇ ಒತ್ತಡ ಇಲ್ಲದೇ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬಿಜೆಪಿಯಲ್ಲಿ ಪುತ್ರ ವ್ಯಾಮೋಹ ಪರ್ವ: ಮಗನಿಗಾಗಿ ಕ್ಷೇತ್ರ ತ್ಯಾಗ, ಬಿಎಸ್‌ವೈ ಹಾದಿ ಹಿಡಿದ ಈಶ್ವರಪ್ಪ

ABOUT THE AUTHOR

...view details