ಕರ್ನಾಟಕ

karnataka

ಗಿರಿಜಾ ಕಲ್ಯಾಣದ ತೆಪ್ಪೋತ್ಸವ

By

Published : Jun 28, 2023, 9:34 PM IST

ETV Bharat / videos

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ನಡೆದ ಗಿರಿಜಾ ಕಲ್ಯಾಣದ ತೆಪ್ಪೋತ್ಸವ- ವಿಡಿಯೋ

ಮೈಸೂರು : ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ವಿಜೃಂಭಣೆಯ ತೆಪ್ಪೋತ್ಸವ ನಡೆಯಿತು. ನದಿದಡದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಉತ್ಸವ ಕಣ್ತುಂಬಿಕೊಂಡರು. 

ಇಂದು (ಬುಧವಾರ) ಸಂಜೆ 7.30ಕ್ಕೆ ದೇವಸ್ಥಾನದಿಂದ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಕಪಿಲಾ ನದಿತೀರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್‌ ಮಾರ್ಗದರ್ಶನದಲ್ಲಿ ದೇವಾಲಯದ ಅರ್ಚಕರು ಪೂಜೆ ಸಲ್ಲಿಸಿದರು. ವಿವಿಧ ಪುಷ್ಪಗಳು ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದ ಯಾಂತ್ರಿಕ ದೋಣಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಪೂರ್ವ- ಪಶ್ಚಿಮವಾಗಿ ಮೂರು ಸುತ್ತು ಪ್ರದಕ್ಷಿಣೆಯ ಮೂಲಕ ನದಿ ದಡದಲ್ಲಿ ನೆರೆದಿದ್ದ ಜನರಿಗೆ ತೆಪ್ಪೋತ್ಸವ ವೀಕ್ಷಿಸಲು ಅನುವು ಮಾಡಿಕೊಡಲಾಯಿತು.

ತೆಪ್ಪೋತ್ಸವ ನಂತರ ಉತ್ಸವ ಮೂರ್ತಿಯನ್ನು ನದಿಯ ದಡದಿಂದ ವಾಪಸ್‌ ಹೊತ್ತು ತಂದು ದೇವಾಲಯದ ರಥ ಬೀದಿಯಲ್ಲಿ ಮೆರವಣಿಗೆ ಮಾಡಿ, ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಗಿರಿಜಾ ಕಲ್ಯಾಣದ ಅಂಗವಾಗಿ 3 ದಿನಗಳ ಕಾಲ ಕಪಿಲಾ ನದಿಯಲ್ಲಿ ಜರುಗಲಿದ್ದು, ಮೊದಲ ದಿನ ಮಂಗಳವಾರ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.      

ಇದನ್ನೂ ಓದಿ :ಬಿಸಿಲ ತಾಪಕ್ಕೆ ಬಸವಳಿದ ಭಕ್ತರು: ನಂಜನಗೂಡು ದೇಗುಲದ ಮುಂಭಾಗದ ರಸ್ತೆಗಳು ಕೂಲ್ ಕೂಲ್

ABOUT THE AUTHOR

...view details