ಕರ್ನಾಟಕ

karnataka

ಆಂಜನೇಯ ಮೂರ್ತಿ ಎದುರು ದೇಹದಾರ್ಢ್ಯ ಪ್ರದರ್ಶನಕ್ಕೆ ಕಾಂಗ್ರೆಸ್​ ಆಕ್ಷೇಪ

ಆಂಜನೇಯ ಮೂರ್ತಿ ಎದುರು ದೇಹದಾರ್ಢ್ಯ ಪ್ರದರ್ಶನಕ್ಕೆ ಕಾಂಗ್ರೆಸ್​ ಆಕ್ಷೇಪ

By

Published : Mar 6, 2023, 6:29 PM IST

Published : Mar 6, 2023, 6:29 PM IST

ರತ್ಲಾಮ್ (ಮಧ್ಯ ಪ್ರದೇಶ):ಪ್ರಹ್ಲಾದ್ ಪಟೇಲ್ ಸಂಘಟನಾ ಸಮಿತಿ ಮತ್ತು ರತ್ಲಾಮ್​ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 13ನೇ ಜೂನಿಯರ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳಾ ಸ್ಪರ್ಧಿಗಳ ಅಶ್ಲೀಲ ಪ್ರದರ್ಶನದ ಬಗ್ಗೆ ಕಾಂಗ್ರೆಸ್ ಮುಖಂಡರು, ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಬಿಜೆಪಿ ಮತ್ತು ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್ ವಿರುದ್ಧ ಕಾಂಗ್ರೆಸ್ ನಾಯಕ ಪರಸ್ ಸಕ್ಲೇಚಾ ವಾಗ್ದಾಳಿ ನಡೆಸಿದರು.

ಆಂಜನೇಯ ಮೂರ್ತಿಯ ಮುಂದೆ ಅಶ್ಲೀಲ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಮತ್ತು ಈ ಕ್ರಮವು ಮಹಿಳೆಯರು ಮತ್ತು ಹಿಂದೂ ದೇವತೆಗಳ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಕ್ಲೇಚಾ ಟ್ವೀಟ್​​ ಮಾಡಿದ್ದಾರೆ. ಭಾಗವಹಿಸುವವರು ಆಕ್ಷೇಪಾರ್ಹ ವೇಷಭೂಷಣಗಳನ್ನು ಧರಿಸಿ ಕ್ಯಾಂಪ್ ವಾಕ್​ ಮಾಡಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಬಿಜೆಪಿ ಮುಖಂಡ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿಂದೂ ಸಂಘಟನೆಗಳು ಮತ್ತು ಕಾಂಗ್ರೆಸ್ ಖಂಡಿಸಿವೆ. ಬಿಜೆಪಿಯಿಂದ ಭಾರತೀಯ ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಮಾನಿಸಲಾಗುತ್ತಿದೆ ಎಂದು ಸಕ್ಲೇಚಾ ಹೇಳಿದ್ದಾರೆ.

ಇದನ್ನೂ ಓದಿ:ಬ್ಯಾಟ್‌ನಲ್ಲಿ ಧೋನಿ ಹೆಸರು ಬರೆದು ಅರ್ಧಶತಕ ಸಿಡಿಸಿ ಯುಪಿ ಗೆಲುವಿಗೆ ಕಾಣಿಕೆ ನೀಡಿದ ಕಿರಣ್‌!

ABOUT THE AUTHOR

...view details