ಕರ್ನಾಟಕ

karnataka

ETV Bharat / videos

ಮುದ್ದೇಬಿಹಾಳ: ಕಡಲೆ ಬೀಜಕ್ಕಾಗಿ ರೈತರ ಪಾದರಕ್ಷೆ ಪಾಳಿ

By

Published : Sep 28, 2022, 6:55 PM IST

Updated : Feb 3, 2023, 8:28 PM IST

ಮುದ್ದೇಬಿಹಾಳ: ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ರಿಯಾಯಿತಿ ದರದಲ್ಲಿ ಕಡಲೆ ಬೀಜ ಪಡೆದುಕೊಳ್ಳಲು ರೈತರು ಪಾದರಕ್ಷೆಗಳನ್ನು ಸರತಿಸಾಲಿನಲ್ಲಿ ಇಟ್ಟ ಘಟನೆ ನಡೆದಿದೆ. ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಎದುರಿಗೆ ಕಡಲೆ ಬೀಜ ವಿತರಣೆಗೆ ಚಾಲನೆ ನೀಡಲಾಗಿದ್ದು, ಕಡಲೆ ಬೀಜವನ್ನು ಪಡೆಯಲು ರೈತರು ಪಾದರಕ್ಷೆಗಳನ್ನು ಸರತಿಯಲ್ಲಿಟ್ಟಿದ್ದಾರೆ. ಈ ಬಗ್ಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಆರ್.ಕಟ್ಟೀಮನಿ ಸಮರ್ಪಕ ಪ್ರಮಾಣದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ಎಲ್ಲ ರೈತರಿಗೆ ಬಿತ್ತನೆ ಬೀಜ ನೀಡಲಾಗುತ್ತಿದೆ. ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದರು.
Last Updated : Feb 3, 2023, 8:28 PM IST

ABOUT THE AUTHOR

...view details