ಕರ್ನಾಟಕ

karnataka

ದೀಡ್​ ನಮಸ್ಕಾರ

ETV Bharat / videos

ಪ್ರಿಯಾಂಕ್ ಖರ್ಗೆ ಗೆಲುವಿಗಾಗಿ ಅಭಿಮಾನಿಗಳ ದೀಡ್​ ನಮಸ್ಕಾರ

By

Published : May 12, 2023, 5:10 PM IST

ಕಲಬುರಗಿ :ವಿಧಾನಸಭಾ ಚುನಾವಣೆಯಮತ ಏಣಿಕೆಗೆ ಕ್ಷಣಗಣನೆ ಅರಂಭವಾಗಿದ್ದು, ತಮ್ಮ ನೆಚ್ಚಿನ ನಾಯಕರ ಗೆಲುವಿಗಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ್ ಖರ್ಗೆ ಗೆಲವು ಸಾಧಿಸಲಿ ಎಂದು ಅಭಿಮಾಗಳು ಈ ಭಾಗದ ಸುಪ್ರಸಿದ್ಧ ದೇವತೆಯಾದ ಶ್ರೀ ನಾಗಾವಿ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿದ್ದು, ದೀಡ್​​ ನಮಸ್ಕಾರ ಹಾಕಿದ್ದಾರೆ.   

ಇದನ್ನೂ ಓದಿ :ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ‌: ಡಿಸಿ ಸೆಲ್ವಮಣಿ 

ಬಸವರಾಜ ಕಟಮಳ್ಳಿ ಹಾಗೂ ರಾಜು ಗಟ್ಟು ಎಂಬುವರು ದೀಡ್​ ನಮಸ್ಕಾರ ಹಾಕಿದ್ದು, ಈ ಮೂಲಕ ಪ್ರಿಯಾಂಕ್ ಖರ್ಗೆ ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಎರಡು ಅವಧಿಗಳ ಕಾಲ ಶಾಸಕರಾಗಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಗೆಲುವು ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಸಹಕಾರವಾಗಬೇಕಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಮತ್ತೆ ಗೆದ್ದು ಬರಬೇಕು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಅಭಿಮಾನಿಗಳ ಮಾತಾಗಿದೆ.   

ಇದನ್ನೂ ಓದಿ :ಕಾಂಗ್ರೆಸ್‌ನವರ ರೆಸಾರ್ಟ್​ ರಾಜಕೀಯದ ಮಾತು ಹಾಸ್ಯಾಸ್ಪದ: ಬಿ.ಸಿ.ಪಾಟೀಲ್

ABOUT THE AUTHOR

...view details