ಮೈಸೂರು: ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಶಾಸಕರಾಗಲಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ಜಾತ್ರೆಯಲ್ಲಿ ಅಭಿಮಾನಿಗಳು ಎಸೆದಿದ್ದಾರೆ. ತಿ.ನರಸೀಪುರ ತಾಲೂಕಿನ ಬನ್ನೂರು ಹೇಮಾದ್ರಾಂಭ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದೆ. ಬಾಳೆಹಣ್ಣಿನಲ್ಲಿ ಮುಂದಿನ ಎಂಎಲ್ಎ ಸುನಿಲ್ ಬೋಸ್ ಎಂಬ ಬರಹದ ವಿಡಿಯೋ ವೈರಲ್ ಆಗಿದೆ. ನೆಕ್ಟ್ಸ್ ಸಿಎಂ ಡಿಕೆ ಬಾಸ್ ಎಂದು ಬರೆದು ರಥಕ್ಕೆ ಅಭಿಮಾನಿಗಳು ಎಸೆದಿದ್ದಾರೆ.
ಇದನ್ನೂ ಓದಿ:ರಿಮೋಟ್ ಕಂಟ್ರೋಲ್ ಮೂಲಕ ಚಲಿಸುತ್ತದೆ ವಾಲ್ಮೀಕಿ ಮಠದ ರಥ!