ಕರ್ನಾಟಕ

karnataka

By

Published : Nov 12, 2022, 12:58 PM IST

Updated : Feb 3, 2023, 8:32 PM IST

ETV Bharat / videos

ರಾಜಾರೋಷವಾಗಿ ಬೀದಿಯಲ್ಲೇ ನಡೆದುಕೊಂಡ ಹೋದ ಮೊಸಳೆ!

ರಾಜಸ್ಥಾನದ ಕೆರೆಗಳ ನಗರಿ ಉದಯಪುರದಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವೊಂದು ಸಂಚಲನ ಮೂಡಿಸುತ್ತಿದೆ. ವಿಡಿಯೋದಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ತೆವಳುತ್ತಿರುವುದನ್ನು ಕಾಣಬಹುದು. ಸುಭಾಷ್ ನಗರದಿಂದ ಅಯಾದ್ ಮ್ಯೂಸಿಯಂಗೆ ಸಂಪರ್ಕ ಕಲ್ಪಿಸುವ ಹೊಸ ಸೇತುವೆಯ ಮೇಲೆ ಈ ಮೊಸಳೆ ಕಾಣಿಸಿಕೊಂಡಿದೆ. ನದಿಯ ಮೇಲೆ ನಿರ್ಮಿಸಲಾದ ಸೇತುವೆ ಎತ್ತರ ತುಂಬಾ ಕಡಿಮೆಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಸುಮಾರು 4 ಅಡಿಗಳ ಎತ್ತರದವರೆಗೆ ನೀರು ಹರಿದು ಸುಮಾರು 15 ದಿನಗಳ ಕಾಲ ಸೇತುವೆ ಮುಚ್ಚಿತ್ತು. ಮಳೆಗಾಲದಲ್ಲಿಯೇ ಮೊಸಳೆಗಳು ಸೇತುವೆ ಮೇಲೆ ಕಾಣಿಸುವುದು ಸಾಮಾನ್ಯವಾಗಿದೆ. ಮೊಸಳೆ ಪ್ರತ್ಯಕ್ಷವಾದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Last Updated : Feb 3, 2023, 8:32 PM IST

ABOUT THE AUTHOR

...view details