ಕರ್ನಾಟಕ

karnataka

ಘಾಟಿ ಸುಬ್ರ‌‌ಹ್ಮಣ್ಯ ದೇವಾಲಯದಲ್ಲಿ ಅದ್ಧೂರಿ ಚಂಪಾ ಷಷ್ಠಿ ಆಚರಣೆ

By ETV Bharat Karnataka Team

Published : Dec 18, 2023, 8:06 PM IST

ETV Bharat / videos

ಘಾಟಿ ಸುಬ್ರ‌‌ಹ್ಮಣ್ಯ ದೇವಾಲಯದಲ್ಲಿ ಅದ್ಧೂರಿ ಚಂಪಾ ಷಷ್ಠಿ ಆಚರಣೆ

ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ಶ್ರೀ ಘಾಟಿ ಸುಬ್ರ‌‌ಹ್ಮಣ್ಯ ದೇವಾಲಯದಲ್ಲಿ ಚಂಪಾ ಷಷ್ಠಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಚಂಪಾ ಷಷ್ಠಿ ಹಿನ್ನೆಲೆ ಘಾಟಿ ಸುಬ್ರಹ್ಮಣ್ಯನಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯಕ್ಕೂ ಹಲವು ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ಸೋಮವಾರ ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸುಬ್ರಹ್ಮಣ್ಯ ದೇವನಿಗೆ ಪೂಜೆ ಸಲ್ಲಿಸಿದರು.

ಚಂಪಾ ಷಷ್ಠಿಯಂದು ವಿಶೇಷವಾಗಿ ಈಶ್ವರ ಹಾಗೂ ಸುಬ್ರಹ್ಮಣ್ಯನಿಗೆ, ಅದ್ಧೂರಿಯಾಗಿ ಪೂಜೆ, ಉತ್ಸವಗಳು ನಡೆಯುತ್ತವೆ. ಈ ಉತ್ಸವ ಮಾರ್ಗಶಿರ ಮಾಸದ ಶುಕ್ಲ ಪಕ್ಷದಂದು ನಡೆಯುತ್ತದೆ. ಸಂತೋಷ, ನೆಮ್ಮದಿ, ಸುಖ, ಶಾಂತಿ, ಆರೋಗ್ಯ, ಧನ್ಯಾತ್ಮಕ ಭಾವನೆಗಳು ಮನದಲ್ಲಿ ಅಭಿವೃದ್ಧಿಯಾಗಲಿ ಎನ್ನುವುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ. ಚಂಪಾ ಷಷ್ಠಿಯನ್ನು ಹಲವು ದೇವಸ್ಥಾನಗಳಲ್ಲಿ ಆಚರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ, ಸುಬ್ರಹ್ಮಣ್ಯನಿಗೆ ವಿಶೇಷ ಅಲಂಕಾರ ಪೂಜೆಯೊಂದಿಗೆ ಪಂಚಮಿ ರಥೋತ್ಸವ ಹಾಗೂ ಮಹಾ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಇದನ್ನೂ ನೋಡಿ:ಕುಕ್ಕೆ ಸುಬ್ರಹ್ಮಣ್ಯನಿಗೆ ಚಂಪಾಷಷ್ಠಿ ವೈಭವ: ಬ್ರಹ್ಮರಥ ನೋಡುವುದೇ ಮಹಾಭಾಗ್ಯ

ABOUT THE AUTHOR

...view details