ಕರ್ನಾಟಕ

karnataka

ದೆಹಲಿ ಸಾರಿಗೆ ಬಸ್​ ಅಪಘಾತ

By ETV Bharat Karnataka Team

Published : Nov 4, 2023, 7:01 PM IST

Updated : Nov 4, 2023, 7:09 PM IST

ETV Bharat / videos

ದೆಹಲಿ ಸಾರಿಗೆ ಬಸ್​ ಅಪಘಾತ: ಒಬ್ಬ ಸಾವು, ಇಬ್ಬರಿಗೆ ಗಾಯ.. ಘಟನೆಯ ಭಯಾನಕ ದೃಶ್ಯ ಸೆರೆ

ನವದೆಹಲಿ:ದೆಹಲಿ ಸಾರಿಗೆ ಬಸ್ಸೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವಾದ ಬಸ್ ಪ್ರಯಾಣಿಕರನ್ನು ಬಿಟ್ಟು​ ರೋಹಿಣಿ ಸೆಕ್ಟರ್​ ಮಾರ್ಗವಾಗಿ ಡಿಪೋಗೆ ಚಲಿಸುತಿತ್ತು. ಈ ವೇಳೆ ಹಠಾತ್ತನೆ ನಿಯಂತ್ರಣ ಕಳೆದುಕೊಂಡು ಕಾರು, ರಿಕ್ಷಾ ಸೇರಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಬಸ್​ ಏಕಾಎಕಿ ರಸ್ತೆ ಬದಿ ನಿಲ್ಲಿಸಿದ್ದ ದಿಚಕ್ರ ವಾಹನಗಳಿಗೆ ಬಂದು ಡಿಕ್ಕಿ ಹೊಡೆದಿರುವುದು ಕಂಡು ಬಂದಿದೆ. 

ಘಟನೆ ಬಳಿಕ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಬಸ್​ನ ತಾಂತ್ರಿಕ ದೋಷದಿಂದಾಗಿ ಅಪಘಾತ ಸಂಭವಿಸಿದೆಯಾ ಅಥವಾ ಚಾಲಕನ ಬೇಜವಾಬ್ದಾರಿಯಿಂದ ನಡೆದಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಹಳಿ ದಾಟುತ್ತಿದ್ದ ಆನೆಗಳ ಹಿಂಡು..ಗಜಪಡೆ ಸುರಕ್ಷತೆಗೆ ಎಕ್ಸ್​ಪ್ರೆಸ್​​​ ನಿಲ್ಲಿಸಿದ ಅಧಿಕಾರಿಗಳು -WATCH VIDEO

Last Updated : Nov 4, 2023, 7:09 PM IST

ABOUT THE AUTHOR

...view details