ಕರ್ನಾಟಕ

karnataka

ಬುದ್ಧ ಅಮರನಾಥ ಯಾತ್ರೆ ಮುಕ್ತಾಯ

By ETV Bharat Karnataka Team

Published : Sep 1, 2023, 1:33 PM IST

ETV Bharat / videos

ಬುದ್ಧ ಅಮರನಾಥ ಯಾತ್ರೆ ಮುಕ್ತಾಯ: ದಶನಮಿ ಅಖಾರ ದೇವಸ್ಥಾನದಲ್ಲಿ ಪವಿತ್ರ ಬೆಳ್ಳಿ ದಂಡ ಪ್ರತಿಷ್ಠಾಪನೆ

ಪೂಂಚ್ ( ಜಮ್ಮು ಮತ್ತು ಕಾಶ್ಮೀರ): ಶತಮಾನಗಳ ಹಳೆಯ ಸಂಪ್ರದಾಯದಂತೆ ರಕ್ಷಾ ಬಂಧನ ಮುಗಿದ ಒಂದು ದಿನದ ನಂತರ ಇಂದು ಬೆಳಗ್ಗೆ ಹಳೆಯ ಅಮರನಾಥ ದೇವಸ್ಥಾನದಿಂದ ಶ್ರೀ ಶಂಕರ ಮತ್ತು ಪಾರ್ವತಿ ದೇವಿಯ ಪವಿತ್ರ ಬೆಳ್ಳಿಯ ದಂಡವನ್ನು (ಬೆತ್ತ) ರಾಜಗುರು ಗುಡಿ ಶ್ರೀ ದಶನಮಿ ಅಖಾರ ದೇವಸ್ಥಾನಕ್ಕೆ ಮರಳಿ ಕರೆ ತರಲಾಯಿತು.  

ಮೂರು ದಿನಗಳ ಹಿಂದೆ ಶ್ರೀಬುಧ ಅಮರನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಂಕರ ಹಾಗೂ ಪಾರ್ವತಿ ದೇವಿಯ ಪ್ರತೀಕವಾದ ಬೆಳ್ಳಿಯ ದಂಡವನ್ನು ರಾಜಗುರು ಗಡ್ಡಿಯ ಮಹಾಂತ 1008 ಮಹಾಮಂಡಲೇಶ್ವರ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ಇಂದು ಬೆಳಗ್ಗೆ ದೇವಸ್ಥಾನದಿಂದ ಹೊರ ತರಲಾಯಿತು. ಈ ವೇಳೆ, ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಬಳಿಕ ಬೆತ್ತವನ್ನು ಮಂಡಿಯಿಂದ ಪೂಂಚ್ ಕಡೆಗೆ ಯಾತ್ರೆಯ ಮೂಲಕ ತರಲಾಯಿತು.  

ಬೆಳಗ್ಗೆ ಹತ್ತು ಗಂಟೆಗೆ ಪವಿತ್ರ ಬೆಳ್ಳಿಯ ದಂಡವನ್ನು ಶ್ರೀ ದಶನಮಿ ಅಖಾರ ದೇವಸ್ಥಾನಕ್ಕೆ ತರಲಾಯಿತು. ಇಲ್ಲಿ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಜನರು ಅದ್ಧೂರಿ ಸ್ವಾಗತ ಕೋರಿದರು. ಇದಾದ ಬಳಿಕ ಅರ್ಚಕರು ಬೆತ್ತಕ್ಕೆ ಆರತಿ ನೆರವೇರಿಸಿದರು. ಆನಂತರ  ಮುಂದಿನ ವರ್ಷದವರೆಗೆ ಶ್ರೀ ದಶನಮಿ ಅಖಾರ ದೇವಸ್ಥಾನದಲ್ಲಿ ಪವಿತ್ರ ದಂಡವನ್ನು ಸ್ಥಾಪಿಸಲಾಯಿತು. ಆ ಮೂಲಕ ಬುದ್ಧ ಅಮರನಾಥ ಬೆತ್ತದ ಯಾತ್ರೆ ಮುಕ್ತಾಯಗೊಂಡಿತು. 

ಇದನ್ನೂ ಓದಿ :ಪವಿತ್ರ ಅಮರನಾಥ ಗುಹೆಗೆ 4.5 ಲಕ್ಷ ಯಾತ್ರಾರ್ಥಿಗಳ ಭೇಟಿ; ಈ ವರ್ಷದ ಯಾತ್ರೆ ಸಂಪನ್ನ

ABOUT THE AUTHOR

...view details