ಕರ್ನಾಟಕ

karnataka

ಅಲಂಕಾರಗೊಂಡ ಬದರಿನಾಥ ದೇವಾಲಯದ ಬಾಗಿಲು

ETV Bharat / videos

ಚಾರ್ಧಾಮ್ ಯಾತ್ರೆ, ಅದ್ಧೂರಿಯಾಗಿ ತೆರೆಯಲಿದೆ ಬದರಿನಾಥ ದೇವಾಲಯ ಬಾಗಿಲು - ದೇವಸ್ಥಾನದ ಆಡಳಿತ ಸಮಿತಿ

By

Published : Apr 26, 2023, 11:05 PM IST

ಚಮೋಲಿ(ಉತ್ತರಾಖಂಡ): ಚಾರ್ಧಾಮ್ ಯಾತ್ರೆ ಪ್ರಯುಕ್ತ ಬದರಿನಾಥ ದೇವಾಲಯದ ಬಾಗಿಲು ಗುರುವಾರ ತೆರೆಯಲಿದೆ. ಬೆಳಗ್ಗೆ 7.10ಕ್ಕೆ ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಗವಾನ್ ಬದರಿನಾಥ ದೇವಾಲಯದ ಬಾಗಿಲು ತೆರೆಯಲಾಗುವುದು. ಬುಧವಾರ ಬದರಿನಾಥ ದೇಗುಲವನ್ನು 20 ಕ್ವಿಂಟಾಲ್ ಹೂವಿನಿಂದ ಅಲಂಕರಿಸಿದ್ದು, ವಿವಿಧ ಪೂಜೆ ವಿಧಾನಗಳೊಂದಿಗೆ ದೇವಸ್ಥಾನದ ಆಡಳಿತ ಸಮಿತಿ ಬಾಗಿಲು ತೆರೆಯುವ ಸಿದ್ಧತೆಯಲ್ಲಿ ತೊಡಗಿದೆ.

ಪಾಂಡುಕೇಶ್ವರದಲ್ಲಿನ ಯೋಗ್ ಬದ್ರಿ ಮತ್ತು ಕುಬೇರ ದೇವಸ್ಥಾನದ ಬಾಗಿಲು ತೆರೆವ ಸಲುವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರಿಂದ ಶುಭ ಗೀತೆಗಳು ಮತ್ತು ಭಜನೆಗಳೊಂದಿಗೆ ಡೋಲಿ ಮೆರವಣಿಗೆ ನಡೆಯಿತು. ಪಾಂಡುಕೇಶ್ವರದಿಂದ, ಭಗವಾನ್ ಬದ್ರಿ ವಿಶಾಲ್, ಭಗವಾನ್ ಕುಬೇರ ಮತ್ತು ಭಗವಾನ್ ಉದ್ಧವ್ ಜಿ ಅವರ ಡೋಲಿ ಸಹಿತ ಬದರಿನಾಥ ಧಾಮಕ್ಕೆ ಹೊರಡಲಾಯಿತು. ಪಾಂಡುಕೇಶ್ವರ ಯೋಗ ಬದರಿಯಿಂದ ಆದಿ ಗುರು ಶಂಕರಾಚಾರ್ಯರ ಗದ್ದುಯಿಂದ ಬದರಿನಾಥ ಧಾಮಕ್ಕೆ ಹೊರಟಿತು.

ಬುಧವಾರ ಸಂಜೆ ಡೋಲಿ ಆದಿ ಗುರು ಶಂಕರಾಚಾರ್ಯರ ಸಿಂಹಾಸನ, ಶ್ರೀ ರಾವಲ್ ಜಿ, ಗಡು ಘಡಾ, ಬದರಿಯಿಂದ ಪಾಂಡುಕೇಶ್ವರ ಯೋಗ್, ಶ್ರೀ ಉದ್ಧವ್ ಜಿ, ಶ್ರೀ ಕುಬೇರ್ ಜಿ ದೇವಾಲಯಗಳಿಂದ ಶ್ರೀ ಬದರಿನಾಥ ಧಾಮ್​ವನ್ನು ತಲುಪುತ್ತಿದೆ.

ABOUT THE AUTHOR

...view details