ಕರ್ನಾಟಕ

karnataka

ಗಾಂಜಾ ವ್ಯಸನಿ ಬಂಧಿಸಿದ ಪೊಲೀಸರು

By

Published : Aug 21, 2023, 8:05 AM IST

ETV Bharat / videos

ಗಾಂಜಾ ವ್ಯಸನಿಯಿಂದ ಸಾರ್ವಜನಿಕರಿಗೆ ಕಿರಿಕಿರಿ: ಸಿನಿಮೀಯ ಶೈಲಿಯಲ್ಲಿ ಆರೋಪಿ ಬಂಧಿಸಿದ ಪೊಲೀಸರು

ಉಳ್ಳಾಲ : ಬೈಕ್​ನಲ್ಲಿ ಮನಸೋ ಇಚ್ಛೆ ಸಂಚರಿಸಿ ರಾಜ್ಯ ಹೆದ್ದಾರಿ ನಡುವೆ ನಿಂತು ಸಾರ್ವಜನಿಕವಾಗಿ ಶಾಂತಿಭಂಗ ಮಾಡುತ್ತಿದ್ದ ಗಾಂಜಾ ವ್ಯಸನಿಯನ್ನು ಕೊಣಾಜೆ ಠಾಣಾ ಪೊಲೀಸರು ಚಾಣಾಕ್ಷತನದಿಂದ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಉಳ್ಳಾಲದ ಮುಕ್ಕಚ್ಚೇರಿ ಕೈಕೋ ನಿವಾಸಿ ಅಬೂಬಕರ್ ಸಿದ್ದೀಖ್‌ ( 24) ಬಂಧಿತ ಆರೋಪಿ.  

ಇದನ್ನೂ ಓದಿ : ಗಾಂಜಾ ಲೇಪಿತ ಚಾಕೊಲೇಟ್ ಮಾರಾಟ : ಇಬ್ಬರು ಆರೋಪಿಗಳ ಬಂಧನ

ಗಾಂಜಾ ಸೇವಿಸಿ ಬೈಕ್​ನಲ್ಲಿ ಬಂದಿದ್ದ ಆರೋಪಿ ಅಬೂಬಕರ್ ಸಿದ್ದೀಖ್‌, ಕೈಯಲ್ಲಿ ಚೂರಿ ಮತ್ತು ಕಲ್ಲು ಹಿಡಿದುಕೊಂಡು ಆತಂಕ ಸೃಷ್ಟಿಸಿದ್ದ. ಕೂಡಲೇ ಸ್ಥಳೀಯರು ಕೊಣಾಜೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ನಿವೃತ್ತ ಯೋಧ ಸಂತೋಷ್ ಹಿಂಬದಿಯಿಂದ ಲಾಕ್ ಮಾಡಿ, ಸಿದ್ದೀಖ್​ನನ್ನು ಬಂಧಿಸುವಲ್ಲಿ ಸಫಲರಾದರು. ಈ ವೇಳೆ ಠಾಣಾ ಸಿಬ್ಬಂದಿ ಹಾಗೂ ಇನ್ನೋರ್ವ ನಿವೃತ್ತ ಯೋಧ ಪೂರ್ಣೇಶ್ ಸಹ ಭಾಗಿಯಾಗಿದ್ದರು. ಘಟನೆ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ :ಗಾಂಜಾ ಅಮಲಿನಲ್ಲಿ ನಡುರಸ್ತೆಯಲ್ಲಿ ಪುಡಿರೌಡಿಗಳ ಅಟ್ಟಹಾಸ : ಸಿಸಿಟಿವಿ ದೃಶ್ಯ

ABOUT THE AUTHOR

...view details