ಕರ್ನಾಟಕ

karnataka

ETV Bharat / videos

ನಾಗರ ಹಾವಿನೊಂದಿಗೆ ಸೆಲ್ಫಿ ತೆಗದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ....

By

Published : Jan 25, 2023, 7:58 PM IST

Updated : Feb 3, 2023, 8:39 PM IST

ನೆಲ್ಲೂರು (ಆಂಧ್ರಪ್ರದೇಶ): ವಿಷಪೂರಿತ ನಾಗರಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವೇಳೆ ಹಾವು ಕಚ್ಚಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಲ್ಲಿಯ ಮಂಗಳಂಪಾಡು ಎಂಬಲ್ಲಿ ನಡೆದಿದೆ. ಜಗದೀಶ್ (24)​ ಮೃತ ಯುವಕ. ನಾಗರ ಹಾವನ್ನು ಹೆಗಲ ಮೇಲೆ ಕೂರಿಸಿಕೊಂಡು ಸೆಲ್ಫಿ ತೆಗೆದುಕೊಳ್ಳು ಜಗದೀಶ್​ ಮುಂದಾಗಿದ್ದ ವೇಳೆ ಕೈಗೆ ಹಾವು ಕಡಿದಿದೆ. ಕೂಡಲೇ ಜಗದೀಶ್​ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದುರಾದೃಷ್ಟವಾಶತ್​ ಆಸ್ಪತ್ರೆಯಲ್ಲಿ ಆ್ಯಂಟಿ ವೆನಮ್​ (ಹಾವು ಕಡೆದಾಗ ಕೊಡುವ ಮದ್ದು)ಇಲ್ಲದ ಕಾರಣ ಜಗದೀಶ್​ ಅಸುನೀಗಿದ್ದಾರೆ.     

ಇದನ್ನೂ ಓದಿ:ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು

Last Updated : Feb 3, 2023, 8:39 PM IST

ABOUT THE AUTHOR

...view details