ಕರ್ನಾಟಕ

karnataka

ರೈತನ ಮೇಲೆ ದಾಳಿ ಮಾಡಿ ಮೇಕೆ ಹೊತ್ತೊಯ್ದ ಚಿರತೆ

ETV Bharat / videos

ಮಂಡ್ಯ: ರೈತನ ಮೇಲೆ ದಾಳಿ ಮಾಡಿ ಮೇಕೆ ಹೊತ್ತೊಯ್ದ ಚಿರತೆ - ವಿಡಿಯೋ... - etv bharat kannada

By ETV Bharat Karnataka Team

Published : Dec 15, 2023, 1:23 PM IST

Updated : Dec 15, 2023, 1:32 PM IST

ಮಂಡ್ಯ: ರೈತನ ಮೇಲೆ ದಾಳಿ ಮಾಡಿದ ಚಿರತೆ ಮೇಕೆ ಹೊತ್ತೊಯ್ದಿರುವ ಘಟನೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಶಿಕುಮಾರ್ ಎಂಬುವವರ ಮೇಲೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ, ದಾಳಿ ನಡೆಸಿದ ಚಿರತೆ ಮೇಕೆಯನ್ನು ಹೊತ್ತೊಯ್ದಿದೆ.

ಗುರುವಾರ ಮಧ್ಯಾಹ್ನ ಶಶಿಕುಮಾರ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿದ್ದು, ಇದರಿಂದ ಕೈಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ. ಗ್ರಾಮದ ಭತ್ತದ ಗದ್ದೆಯಲ್ಲಿ ಎರಡು ಚಿರತೆ ಅಡಗಿದ್ದು, ರೈತನ ಮೇಲೆ ದಾಳಿ ಬೆನ್ನಲ್ಲೇ ಗ್ರಾಮದ ಜನರಲ್ಲಿ ಭೀತಿ ಸೃಷ್ಟಿಯಾಗಿದೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಕಳೆದವಾರ ತುಮಕೂರಿನಲ್ಲಿ ಆಹಾರ ಅರಸಿ ಶ್ವಾನಗಳನ್ನು ಬೇಟೆಯಾಡಿ ತಿಂದು ಹಾಕುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಸಬಾ ಹೋಬಳಿ ಊರು -ಕೆರೆ ಮಲ್ಲೇನಹಳ್ಳಿ ಗ್ರಾಮದಲ್ಲಿ ಸೆರೆಹಿಡಿಸಿದ್ದರು.

ಇದನ್ನೂ ಓದಿ:ನಾಯಿ ಬೇಟೆಯಾಡಲು ಹೋಗಿ 26 ಗಂಟೆ ಮನೆಯೊಳಗೆ ಸೆರೆಯಾದ ಚಿರತೆ - ವಿಡಿಯೋ

Last Updated : Dec 15, 2023, 1:32 PM IST

ABOUT THE AUTHOR

...view details