ಕರ್ನಾಟಕ

karnataka

ಆಕ್ಷೇಪಾರ್ಹ ಪೋಸ್ಟ್​ ವಿರುದ್ಧ ಪ್ರತಿಭಟನೆ: ಪೊಲೀಸರಿಂದ ಲಾಠಿ ಪ್ರಹಾರ

By

Published : Jun 7, 2023, 1:49 PM IST

Updated : Jun 7, 2023, 5:00 PM IST

ಔರಂಗಜೇಬ್​, ಟಿಪ್ಪು ಪೋಸ್ಟ್​ ವಿರುದ್ಧ ಪ್ರತಿಭಟನೆ

ಕೊಲ್ಹಾಪುರ(ಮಹಾರಾಷ್ಟ್ರ):ಸಾಮಾಜಿಕ ಜಾಲತಾಣದಲ್ಲಿನ ಆಕ್ಷೇಪಾರ್ಹ ಪೋಸ್ಟ್​ ಹಾಕಿರುವ ಸಂಬಂಧ ಕೊಲ್ಹಾಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ. ಇಂದು ನಡೆದ ಪ್ರತಿಭಟನೆಯಲ್ಲಿ ಕೋಲಾಹಲ ಉಂಟಾಗಿ, ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

ಹಿಂದು ಪರ ಸಂಘಟನೆಗಳು ಕೊಲ್ಹಾಪುರ ಬಂದ್​ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ನಗರದ ಛತ್ರಪತಿ ಶಿವಾಜಿ ಮಹಾರಾಜ್​ ಚೌಕ್‌ಗೆ ಪ್ರತಿಭಟನಾಕಾರರು ಆಗಮಿಸಿ, ಹಿಂದುತ್ವವಾದಿಗಳ ಮೇಲಿನ ಆರೋಪಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಆಕ್ರೋಶಿತ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವು ವಾಹನಗಳನ್ನು ಉರುಳಿಸಿ ಸ್ಥಳೀಯ ಅಂಗಡಿಗಳನ್ನು ಒತ್ತಾಯ ಪೂರ್ವಕವಾಗಿ ಬಂದ್​ ಮಾಡಲು ಮುಂದಾದಾಗ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದಾರೆ.

ಇದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ. ಜೂನ್ 19ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಓದಿ:ಕೆಆರ್ ಸರ್ಕಲ್ ಅಂಡರ್‌ ಪಾಸ್ ದುರಂತದಿಂದ ಪಾಠ ಕಲಿಯಬೇಕಿದೆ: ಲೋಕಾಯುಕ್ತ ಐಜಿಪಿ

Last Updated : Jun 7, 2023, 5:00 PM IST

ABOUT THE AUTHOR

...view details