ಕರ್ನಾಟಕ

karnataka

ನಟಿ ಕಂಗನಾ ರಣಾವತ್

ETV Bharat / videos

'ತೇಜಸ್'​ ಬಿಡುಗಡೆಗೂ ಮುನ್ನ ಅಯೋಧ್ಯೆಗೆ ಭೇಟಿ ನೀಡಿದ ನಟಿ ಕಂಗನಾ ರಣಾವತ್​

By ETV Bharat Karnataka Team

Published : Oct 26, 2023, 4:42 PM IST

ಅಯೋಧ್ಯೆ (ಉತ್ತರ ಪ್ರದೇಶ): ಬಾಲಿವುಡ್​ ನಟಿ ಕಂಗನಾ ರಣಾವತ್ ನಟನೆಯ 'ತೇಜಸ್​' ಸಿನಿಮಾ ನಾಳೆ (ಅ.27) ಬಿಡುಗಡೆಯಾಗಲಿದೆ. ಈ ನಿಮಿತ್ತ ಅವರು ಇಂದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ರಾಮಮಂದಿರವನ್ನು ಅವರು ವೀಕ್ಷಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಂಗನಾ, "ಕೊನೆಗೂ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದು ಹಿಂದೂಗಳ ಶತಮಾನಗಳ ಹೋರಾಟವಾಗಿದೆ. ಈ ಅದ್ಭುತ ಕ್ಷಣಕ್ಕೆ ನಾವು ಸಾಕ್ಷಿಯಾಗಲಿದ್ದೇವೆ. ನಾನು ಅಯೋಧ್ಯೆಯ ಬಗ್ಗೆ ಸ್ಕ್ರಿಪ್ಟ್​​ ಬರೆದಿದ್ದೇನೆ ಮತ್ತು ಸಂಶೋಧನೆ ಕೂಡ ಮಾಡಿದ್ದೇನೆ. ಇದು 600 ವರ್ಷಗಳ ಸುದೀರ್ಘ ಹೋರಾಟವಾಗಿದ್ದು, ಮೋದಿ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರಿಂದಾಗಿ ಈ ದಿನ ಸಾಧ್ಯವಾಗುತ್ತಿದೆ. ಕ್ರಿಶ್ಚಿಯನ್ನರಿಗೆ ವ್ಯಾಟಿಕನ್​ ಇರುವಂತೆ ಹಿಂದೂಗಳಿಗೆ ಇದು ಅತಿದೊಡ್ಡ ಯಾತ್ರಾ ಸ್ಥಳವಾಗಲಿದೆ. ಮುಂದಿನ ದಿನಗಳಲ್ಲಿ ಇದು ಪ್ರಪಂಚದ ಮುಂದೆ ದೇಶ ಮತ್ತು ಸನಾತನ ಸಂಸ್ಕೃತಿಯ ಭವ್ಯ ಸಂಕೇತವಾಗಲಿದೆ. ನಮ್ಮ 'ತೇಜಸ್​' ಚಿತ್ರದಲ್ಲಿ ರಾಮಮಂದಿರವೂ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ನನಗೆ ರಾಮನನ್ನು ನೋಡಬೇಕೆನಿಸಿತು. ಅದಕ್ಕೆ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ:ಕೆಂಪು ಕೋಟೆಯಲ್ಲಿ ರಾವಣ ದಹನ ಮಾಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ನಟಿ ಕಂಗನಾ ರಣಾವತ್​ 

ABOUT THE AUTHOR

...view details