ಮೋದಿ ಅಲೆ ಹೆಚ್ಚಿದೆ, ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ:ಜಿ.ಎಸ್ ಬಸವರಾಜ್ ಮನದಾಳ - tumakuru
ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಕೂಡ ಉತ್ತಮ ಮತಗಳಿಕೆ ಆಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ದೇವೇಗೌಡರಿಗೆ ಮತಗಳು ದೊರೆತಿಲ್ಲ.ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರು ಮಾಡಿರುವ ಅನ್ಯಾಯವನ್ನು ಜನರು ಮರೆತಿಲ್ಲ. ಅಲ್ಲದೆ ಪ್ರಧಾನಿ ಮೋದಿ ಅಲೆ ವ್ಯಾಪಕವಾಗಿ ಕ್ಷೇತ್ರದಲ್ಲಿದೆ.ಹೀಗಾಗಿ ಇವೆಲ್ಲವೂ ನನ್ನ ಗೆಲುವಿಗೆ ಪೂರಕವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಹೇಳಿದ್ರು.
Last Updated : May 22, 2019, 6:10 PM IST
TAGGED:
tumakuru