ಅದ್ಧೂರಿಯಾಗಿ ನಡೆದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರಥೋತ್ಸವ - ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರಥೋತ್ಸವ
ಉತ್ತರ ಕರ್ನಾಟಕದ ಕಾಶಿ, ಅದ್ವೈತ ಸಿದ್ಧಾಂತದ ತವರೂರು ಹುಬ್ಬಳ್ಳಿಯಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಬೆಳಗಾವಿ, ಹಾವೇರಿ, ಬೀದರ್, ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಮಠಕ್ಕೆ ಬಂದು ಸಿದ್ಧಾರೂಢರು ಹಾಗೂ ಗುರುನಾಥರೂಢರ ಆಶೀರ್ವಾದ ಪಡೆದರು. ಸಡಗರ-ಸಂಭ್ರಮದಿಂದ ಆರಂಭಗೊಂಡ ರಥೋತ್ಸವಕ್ಕೆ ಜಿಲ್ಲಾ ನ್ಯಾಯಾಧೀಶ ಈಶ್ವರ ಭೂತೆ ಸೇರಿದಂತೆ ಹಲವು ಗಣ್ಯರು ವಿದ್ಯುಕ್ತ ಚಾಲನೆ ನೀಡಿದ್ರು.
Last Updated : Feb 22, 2020, 11:29 PM IST