ಕರ್ನಾಟಕ

karnataka

ETV Bharat / videos

ಭದ್ರತೆ ಬದಿಗೊತ್ತಿ ಎತ್ತಿನ ಬಂಡಿ ಏರಿ ಸವಾರಿ ಮಾಡಿದ ಬಿ.ಎಸ್ ಯಡಿಯೂರಪ್ಪ - ಬಿ.ಎಸ್ ಯಡಿಯೂರಪ್ಪ ಎತ್ತಿನ ಬಂಡಿ ಏರಿ ಸವಾರಿ ನ್ಯೂಸ್​

By

Published : Jan 15, 2020, 8:38 PM IST

Updated : Jan 15, 2020, 11:21 PM IST

ಭದ್ರತೆಯನ್ನು ಬದಿಗೊತ್ತಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎತ್ತಿನ ಬಂಡಿ ಏರಿ ಸವಾರಿ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪದ್ಮನಾಭ ನಗರದಲ್ಲಿ ಕಳೆದ ಎರಡು ದಿನಗಳಿಂದ‌ ಜಾನಪದ ಜಾತ್ರೆ ಕಾರ್ಯಕ್ರಮ ಏರ್ಪಡಿಸಿದ್ದು ಇಂದು ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಸುಮಾರು ಒಂದು ಕಿಲೋ ಮೀಟರ್ ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿ ಗಮನ‌ ಸೆಳೆದಿದ್ದಾರೆ. ಸಂಪುಟದ ಸಂಕಟದ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಡಿಯೂರಪ್ಪ, ರಾಜಕೀಯ ಎಲ್ಲಾ ಜಂಜಾಟಗಳನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಜನಪದ ಕಾರ್ಯಕ್ರಮಗಳನ್ನು ನೋಡಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್​ ಉಪಸ್ಥಿತರಿದ್ದಾರೆ.
Last Updated : Jan 15, 2020, 11:21 PM IST

ABOUT THE AUTHOR

...view details