ಕರ್ನಾಟಕ

karnataka

ETV Bharat / videos

ಚಲಿಸುತ್ತಿದ್ದ ಸಿಮೆಂಟ್​​ ಲಾರಿಗೆ ಬೆಂಕಿ.. ನಡುರಸ್ತೆಯಲ್ಲೇ ಹೊತ್ತಿ ಉರಿದ ವಾಹನ!

By

Published : Feb 10, 2022, 10:57 PM IST

Updated : Feb 3, 2023, 8:11 PM IST

ಉಪ್ಪಿನಂಗಡಿ(ಮಂಗಳೂರು): ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಬಳಿ ಸಿಮೆಂಟ್ ಸಾಗಣೆ ಮಾಡ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಹೊತ್ತಿ ಉರಿದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಿಮೆಂಟ್ ಹೊತ್ತು ಸಾಗಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ತಗುಲಿದೆ. ವಾಹನದೊಳಗಿನ ಎಲೆಕ್ಟ್ರಿಕ್ ಶಾರ್ಟ್​​ ಸರ್ಕ್ಯೂಟ್​,ಟೈರ್​​ನಿಂದ ಬೆಂಕಿ ಅವಘಡ ನಡೆದಿದೆ ಎನ್ನಲಾಗ್ತಿದೆ. ವಾಹನದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ತಕ್ಷಣವೇ ಡ್ರೈವರ್​​ ಅಲ್ಲಿಂದ ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Last Updated : Feb 3, 2023, 8:11 PM IST

ABOUT THE AUTHOR

...view details