ಜನತಾ ಕರ್ಫ್ಯೂನಲ್ಲಿ ಊಟ ಸಿಗದೆ ರೋಗಿಗಳ ಸಂಬಂಧಿಕರ ಪರದಾಟ: ಹಸಿವು ನೀಗಿಸಿ ಮಾನವೀಯತೆ ಮೆರೆದ ಯುವಕ - janatha Curfew latest news
ಹಾವೇರಿ ಜಿಲ್ಲಾಸ್ಪತ್ರೆಗೆ ಬಂದಿದ್ದ ರೋಗಿಗಳ ಸಂಬಂಧಿಕರಿಗೆ ಜನಾತಾ ಕರ್ಫ್ಯೂನಿಂದಾಗಿ ಊಟ ಸಿಗದೇ ಪರದಾಡುವಂತಾಗಿತ್ತು, ಇದನ್ನರಿತ ಹೊಂಬರಡಿ ಗ್ರಾಮದ ಬಸವರಾಜ ಎಂಬ ಯುವಕ ರೋಗಿಗಳ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಕರ್ಪ್ಯೂ ಹಿನ್ನೆಲೆಯಲ್ಲಿ ಎಲ್ಲ ಅಂಗಡಿಗಳು ಬಂದಾಗಿದ್ದವು. ಈ ಸಮಯದಲ್ಲಿ ತಮೆಲ್ಲರ ಹಸಿವು ನೀಗಿಸಿದ್ದಕ್ಕಾಗಿ ರೋಗಿಗಳ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.