ಸಹಜ ಸ್ಥಿತಿಗೆ ಮರಳಿದ ದಾವಣಗೆರೆ: ಮಾ. 31 ರ ವರೆಗೆ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ನಿರ್ಬಂಧ - ದಾವಣಗೆರೆ ಸುದ್ದಿ
ದಾವಣಗೆರೆಯಲ್ಲಿ ಖಾಸಗಿ ಬಸ್, ಆಟೋ ಸಂಚಾರ, ವ್ಯಾಪಾರ ವಹಿವಾಟು, ಮಾರುಕಟ್ಟೆಗಳು ಎಂದಿನಂತೆ ಆರಂಭವಾಗಿವೆ. ಹೂವು, ಹಣ್ಣು, ಹಾಲು, ಪತ್ರಿಕೆ ಮಾರಾಟ, ಹೊಟೇಲ್ ಗಳು ಸಹ ಶುರುವಾಗಿವೆ. ಆದರೆ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿದಿಲ್ಲ, ಈ ತಿಂಗಳ 31 ರ ವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ. ಹಾಗಾಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.