ಕರ್ನಾಟಕ

karnataka

ಕೊಪ್ಪಳದಲ್ಲಿ ನಿನ್ನೆ ಒಂದೇ ‌ದಿನ 21 ಜನ ಸೋಂಕಿತರು ಗುಣಮುಖ

By

Published : Jul 1, 2020, 10:22 AM IST

Published : Jul 1, 2020, 10:22 AM IST

ಕೊಪ್ಪಳದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಆತಂಕದ ನಡುವೆಯೂ ನಿನ್ನೆ ಒಂದೇ ‌ದಿನ 21 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ (ಜೂನ್ 30 ಸಂಜೆಯವರೆಗೆ) ಜಿಲ್ಲೆಯಲ್ಲಿ ಒಟ್ಟು 84 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಟ್ಟು 42 ಜನ ಸೋಂಕಿತರು ಗುಣಮುಖರಾಗಿ ಒಬ್ಬರು ಸಾವನಪ್ಪಿದ್ದಾರೆ. ಇನ್ನೂ 41 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಜೂನ್ 30 ಸಂಜೆಯವರೆಗೆ ಒಟ್ಟು 3,677 ಜನರ ಸ್ಯಾಂಪಲ್​ಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 40 ಜನರ ವರದಿ ಪಾಸಿಟಿವ್ ಬಂದಿದೆ ಹಾಗೂ ಇನ್ನೂ 578 ಜನರ ವರದಿ ಬರಬೇಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ತ್ರೂ ಮೂಲಕ ವಿವರ ನೀಡಿದ್ದಾರೆ.

ABOUT THE AUTHOR

...view details