ಟಿಡಿಪಿ ಮುಖಂಡನ ಕಾರಿನ ಮೇಲೆ ವೈಎಸ್ಆರ್ಸಿ ಕಾರ್ಯಕರ್ತರ ದಾಳಿ... ಹಾಡಹಗಲೇ ನಡೆದ ದುಷ್ಕೃತ್ಯ! - ಎಂಎಲ್ಸಿ ಬುದ್ಧ ವೆಂಕಣ್ಣ
ಗುಂಟೂರು: ಟಿಡಿಪಿ ಮಾಜಿ ಶಾಸಕ ಹಾಗೂ ಹಾಲಿ ಎಂಎಲ್ಸಿ ಬುದ್ಧ ವೆಂಕಣ್ಣ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ವೈಎಸ್ಆರ್ಸಿ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಗುಂಟೂರಿನ ಮಾಚೆರ್ಲಾ ಪ್ರದೇಶಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ ವೇಳೆ ಏಕಾಏಕಿ ಅವರ ಕಾರಿನ ಮೇಲೆ ದಾಳಿ ಮಾಡಲಾಗಿದ್ದು, ಈ ವೇಳೆ ಕಾರಿನ ಗ್ಲಾಸ್ ಸಂಪೂರ್ಣವಾಗಿ ಹಾಳಾಗಿವೆ. ಘಟನೆ ವೇಳೆ ಎಂಎಲ್ಸಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.