ಗಾಳಿಪಟ ಹಬ್ಬ ಉತ್ತರಾಯಣ ಸಂಭ್ರಮ; 'ಪಕ್ಷಿ ಸ್ನೇಹಿ ಗಾಳಿಪಟ' ತಯಾರಿಸಿದ ವಿದ್ಯಾರ್ಥಿಗಳು - Uttarayan celebration
ಉತ್ತರಾಯಣ ಹಬ್ಬವು ಗುಜರಾತ್ನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಂಕೇತವಾಗಿ ಗಾಳಿಪಟ ಹಾರಿಸುವುದು ಇಲ್ಲಿನ ಸಂಪ್ರದಾಯ. ಇದನ್ನು ಇಲ್ಲಿ 'ಗಾಳಿಪಟಗಳ ಹಬ್ಬ'ಎಂದೂ ಕರೆಯುವುದು ವಾಡಿಕೆ. ಆದ್ರೆ ಈ ಗಾಳಿಪಟಗಳು ಹಾಗೂ ಅವುಗಳ ದಾರ ಹಕ್ಕಿಗಳ ಜೀವಕ್ಕೆ ಕುತ್ತು ತರುವಂತಹ ಅಪಾಯವೊಡ್ಡುತ್ತದೆ. ಹಾಗಾಗಿ ಸೂರತ್ನ ಐಡಿಟಿ ಫ್ಯಾಶನ್ ಇನ್ಸಿಟ್ಯೂಟ್ನ ವಿದ್ಯಾರ್ಥಿಗಳು ಇದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪಕ್ಷಿಗಳಿಗೆ ಕೆಂಪು ಬಣ್ಣ ಹಾಗೂ ಪುದೀನ ಮತ್ತು ಬೆಳ್ಳುಳ್ಳಿ ಅಂದರೆ ಮಾರು ದೂರ ಹೋಗುತ್ತವಂತೆ. ಈ ಸಂಶೋಧನೆ ನಡೆಸಿದ ವಿದ್ಯಾರ್ಥಿಗಳು ಅವುಗಳ ಅಪಾಯ ತಪ್ಪಿಸಲು ಇಂತಹ ಗಾಳಿಪಟಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ..