ಕರ್ನಾಟಕ

karnataka

ETV Bharat / videos

ಪಾನೀಯದಲ್ಲಿ ವಿಷ ಬೆರಸಿ ಕುಡಿದ ಕುಟುಂಬ... ಮೂವರ ಸಾವು, ಬದುಕುಳಿದ ಮಗ! - ಚಿತ್ತೂರು ಕುಟುಂಬ ಆತ್ಮಹತ್ಯೆ

By

Published : Nov 4, 2019, 3:39 PM IST

ಕುಟಂಬವೊಂದು ತಂಪುಪಾನೀಯದಲ್ಲಿ ವಿಷ ಬೆರಸಿ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹೀಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದರೆ ಮಗ ಬದುಕುಳಿದಿದ್ದಾನೆ. ಚಿತ್ತೂರಿನ ಓಬನಪಲ್ಲೆ ಹೌಸಿಂಗ್​ ಕಾಲೋನಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಲಾರಿ ಡ್ರೈವರ್​ ರವಿ ಕುಟುಂಬ ಕಲಹದಿಂದ ಬೇಸತ್ತು ತಂಪು ಪಾನಿಯದಲ್ಲಿ ವಿಷ ಬೆರಸಿದ್ದಾನೆ. ಆ ವಿಷ ಬೆರಸಿದ ಕೂಲ್ಡ್ರಿಂಕ್ಸ್ ಅ​ನ್ನು ರವಿ ಸೇರಿದಂತೆ ಪತ್ನಿ ಭುವನೇಶ್ವರಿ, 9 ವರ್ಷದ ಮಗಳು ಗಾಯತ್ರಿ ಮತ್ತು ಏಳು ವರ್ಷದ ಮಗ ಸಾಯಿಗೆ ಕುಡಿಸಿದ್ದಾನೆ. ತಂದೆ ರವಿ, ತಾಯಿ ಭುವನೇಶ್ವರಿ ಮತ್ತು ಸಹೋದರಿ ಗಾಯತ್ರಿ ಸಾವನ್ನಪ್ಪಿದ್ದು, ಸಹೋದರ ಸಾಯಿ ಬದುಕುಳಿದಿದ್ದಾನೆ. ಕುಟುಂಬದ ಕಲಹವೇ ಇದಕ್ಕೆ ಕಾರಣ ಎಂದು ಸಂಬಂಧಿಕರು ಮತ್ತು ನೆರೆಹೊರೆಯವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details