ಪುರಿ (ಒಡಿಶಾ): ಭಾರತ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಅವರನ್ನು ಭಾರತ ಸರ್ಕಾರ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ನೆಚ್ಚಿನ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.